ಏಳು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿರುವ ರೈತನ ಮಗಳು

ಏಳು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿರುವ ರೈತನ ಮಗಳು

ದೇವದುರ್ಗ : ಗಬ್ಬೂರು ಗ್ರಾಮದ ರೈತನ ಪುತ್ರಿಯಾಗಿರುವ ಇವರು ಮೊರಾರ್ಜಿ ವಸತಿ ಶಾಲೆಯ ಅತಿಥಿ ಶಿಕ್ಷಕಿ ವಿಜಯಲಕ್ಷ್ಮೀ ಅವರು ಏಳು ಸರ್ಕಾರಿ ನೌಕರಿಗೆ ಆಯ್ಕೆ ಆಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

ಮಹಿಳಾ ಪೊಲೀಸ್ ಪೇದೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕನ್ನಡ ಭಾಷಾ ಶಿಕ್ಷಕಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಿಕ್ಷಕಿ, ವಾರ್ಡನ್ ಹಾಗೂ ಸಹಾಯಕಿ, ಪ.ಪೂರ್ವ ಹಾಸ್ಟೆಲ್‌ಗೆ ಮಹಿಳಾ ವಾರ್ಡನ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಕಲಿತರೆ ಕೆಲಸ ಸಿಗುವುದಿಲ್ಲ ಎನ್ನುವ ಕೀಳರಿಮೆ ಸಲ್ಲದು. ನಿರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎನ್ನುವುದಕ್ಕೆ ನಾನೇ ಸಾಕ್ಷಿ. ನಾನು ಕೋಚಿಂಗ್ ಪಡೆಯದೆ ಮನೆಯಲ್ಲೇ ಓದಿ ದ್ದೇನೆ. ಕೆಎಎಸ್ ಮಾಡುವ ಗುರಿಯಿದ್ದು, ನಿರಂತರ ಅಧ್ಯಯನ ಮಾಡುತ್ತಿದ್ದೇನೆ ಎಂದು ಹೇಳಿದರು.

Related