ಸೇವಾರತ್ನ ಪ್ರಶಸ್ತಿ ಪ್ರಧಾನ

ಸೇವಾರತ್ನ ಪ್ರಶಸ್ತಿ ಪ್ರಧಾನ

ಕುಣಿಗಲ್– ರಾಜ್ಯದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಗುರುತಿಸಿ ರುದ್ರಾಕ್ಷ ಫೌಂಡೇಶನ್ (ರಿ) ಶಿವಮೊಗ್ಗ ವತಿಯಿಂದ ಆಯೋಜಿಸಲಾಗಿದ್ದ 2021 ರ”ಸೇವಾರತ್ನ” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಮೂಲ್ಯ ಹೋಟೆಲ್ ಮಾಲೀಕರು ಹಾಗೂ ಅಮೂಲ್ಯ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ್ ರವರಿಗೆ “ಸೇವಾರತ್ನ”2021ರ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪೂಜ್ಯರಾದ ಯಳನಾಡು ಜಗದ್ಗುರುಗಳಾದ ಜ್ಞಾನಪ್ರಭು ಶ್ರೀ ಸಿದ್ದರಾಮ ದೇಶಿಕೇಂದ್ರ ಶ್ರೀಗಳು ಹಾಗೂ ರುದ್ರಾಕ್ಷ ಫೌಂಡೇಶನ್ನ ಡಾ. ಜಯಪ್ರಕಾಶ್ ಸದ್ಗುರು ಗುರೂಜಿ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ. ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್. ಮೆಟ್ರೋ ಹಾಸ್ಪಿಟಲ್ ಖ್ಯಾತ ವೈದ್ಯರಾದ ತೇಜಸ್ವಿ. ಹಿಂದುಳಿದ ರ‍್ಗಗಳ ನಾಯಕರಾದ ಮಂಜುನಾಥ್. ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ. ಅಯ್ಯಪ್ಪ ದೇವಾಲಯದ ಖ್ಯಾತ ಗುರುಗಳಾದ ಷಣ್ಮುಗಂ. ರುದ್ರಾಕ್ಷ ಫೌಂಡೇಶನ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ದಕ್ಷಿಣ ಭಾರತದಿಂದ ಮತ್ತು ರಾಜ್ಯದಿಂದ ಆಗಮಿಸಿದ್ದ ವಿವಿಧ ಕ್ಷೇತ್ರಗಳಲ್ಲಿನ ಸೇವಾ ವ್ಯಕ್ತಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Related