ಸವದಿಗೆ ಫುಲ್ ಟೆನ್ಸನ್

ಸವದಿಗೆ ಫುಲ್ ಟೆನ್ಸನ್

ಬೆಂಗಳೂರು, ಫೆ. 7 : ಡಿಸಿಎಂ ಲಕ್ಷ್ಮಣ ಸವದಿಗೆ ಈಗ ಫುಲ್ ಟೆನ್ಸನ್. ವಿಧಾನ ಪರಿಷತ್ ಸ್ಥಾನಕ್ಕೆ ನಡೆಯೋ ಚುನಾವಣೆ ಕಣ ರಂಗೇರತೊಡಗಿದೆ. ಅವಿರೋಧವಾಗಿ ಆಯ್ಕೆ ಆಗೋ ಕನಸು ಕಂಡಿದ್ದ ಡಿಸಿಎಂ ಲಕ್ಷ್ಮಣ ಸವದಿಗೆ ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿದಿರೋದು ಟೆನ್ಶನ್ ತರಿಸಿದೆ. ಹೀಗಾಗಿ ಗೆಲ್ಲೋಕೆ ಅಗತ್ಯ ಕಾರ್ಯ ಚಟುವಟಿಕೆ ಮಾಡೋದಕ್ಕೆ ಸವದಿ ಮುಂದಾಗಿದ್ದಾರೆ. ಫೆ. 17ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಹೈಕಮಾಂಡ್ ಸವದಿ ಹೆಸರು ಫೈನಲ್ ಮಾಡಿ, ನಾಮಪತ್ರ ಸಲ್ಲಿಕೆಯೂ ಆಗಿತ್ತು. ಗುರುವಾರ ಕೊನೆಯ ಘಳಿಗೆಯಲ್ಲಿ ಅನಿಲ್ ಕುಮಾರ್ ರನ್ನ ದೋಸ್ತಿ ಪಕ್ಷಗಳು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಸೋತ ಲಕ್ಷ್ಮಣ ಸವದಿಯನ್ನ ಡಿಸಿಎಂ ಮಾಡಿರೋದು ಪಕ್ಷದ ಬಹುತೇಕ ಶಾಸಕರಿಗೆ ಇಷ್ಟ ಇಲ್ಲ. ಹೀಗಾಗಿ ಅಸಮಾಧಾನಿತ ಶಾಸಕರನ್ನ ಮನವೊಲಿಸಿ ಕ್ರಾಸ್ ವೋಟ್ ಮಾಡಿಸೋ ಪ್ಲಾನ್ ದೋಸ್ತಿ ನಾಯಕರದ್ದು. ಸವದಿ ಕೈ ಹಿಡಿಯುತ್ತಾರಾ ಅಥವಾ ಕೈ ಬಿಡ್ತಾರಾ ಅಂತ ಫೆ.17 ಕ್ಕೆ ಗೊತ್ತಾಗಲಿದೆ.

Related