ನಟ ಜಗ್ಗೇಶ ವಾಗ್ದಾಳಿ

ನಟ ಜಗ್ಗೇಶ ವಾಗ್ದಾಳಿ

ಬೆಂಗಳೂರು. ಫೆ. 2 : ಸ್ಯಾಂಡಲ್ವುಡ್ ಹಿರಿಯ ನಟ ದ್ವಾರಕೀಶ್ ಹಾಗೂ ನಿರ್ಮಾಪಕ, ಫೈನಾನ್ಶಿಯರ್ ರಮೇಶ್ ಜಗಳಕ್ಕೆ ನವರಸ ನಾಯಕ ಜಗ್ಗೇಶ್ ಎಂಟ್ರಿ ಕೊಟ್ಟಿದ್ದು, ಸರಣಿ ಟ್ವೀಟ್ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ನಟ ಜಗ್ಗೇಶ್, ಪರೋಕ್ಷವಾಗಿ ನಟ, ನಿರ್ಮಾಪಕ ದ್ವಾರಕೀಶ್ ವಿರುದ್ಧ ಹರಿಹಾಯ್ದಿದ್ದಾರೆ. ‘ನನ್ನ 1 ಕೋಟಿ ರೂ. ಕೇಳಿದರೂ ಹೀಗೆ ಆಗಬಹುದು. ಕೊಟ್ಟವ ಸ್ನೇಹಿತ, ಬಳಸಿಕೊಂಡವರು ಸ್ನೇಹಿತರು, ಇದು ಹಣದ ವಿಷಯ ಮಾತನಾಡುವುದು ಕಷ್ಟ. ನನಗೆ ಬರಬೇಕಾದ 1 ಕೋಟಿ ರೂ. ಹಣಕ್ಕೆ ಬಾಯಿ ತೆಗೆದರೆ ನನ್ನ ವಿಷಯವು ಹೀಗೆ ಬರುವುದು. ಹಣ ಬೇಕಾದಾಗ ಪ್ರಾಮಾಣಿಕ ವ್ಯವಹಾರಸ್ಥರು. ವಾಪಸ್ ಕೊಡುವಾಗ ಮಾಧ್ಯಮ, ಪೊಲೀಸ್, ಮಾನಹಾನಿ ಎಂಥ ದೌರ್ಭಾಗ್ಯ ವ್ಯವಹಾರ. ಬರುವ ಹಣಕ್ಕಾಗಿ ನಾನು ತಾಳ್ಮೆಯಿಂದ ಕಾಯುತ್ತಿರುವ ಮೂರ್ಖ ಎಂದು ಜಗ್ಗೇಶ್ ಮೊದಲ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್ ಎರಡನೇ ಟ್ವೀಟ್ನಲ್ಲಿ ಸಹ ದ್ವಾರಕೀಶ್ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಕಿಡಿಕಾರಿದ್ದಾರೆ. ರಮೇಶ್ ಹಾಗೂ ಜಯಣ್ಣ ಗೌರವಸ್ಥ ವ್ಯವಹಾರಿಗಳು. ಕೊಟ್ಟವ ಕೋಡಂಗಿ, ಇಸ್ಕೊಂಡವ ವೀರಭದ್ರ, ಇದು ಗಾಂಧಿನಗರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಮಿ ಕೀಟಗಳ ಬಗ್ಗೆ ಗೊತ್ತು. ಕಾರಣ ಆ ಮಾಯಾವಿ ಸಮುದ್ರದಲ್ಲಿ 38 ವರ್ಷಗಳ ವಾಸ ಎಂದು ತಮ್ಮ ಮೂರನೇ ಟ್ವೀಟ್ನಲ್ಲಿ ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

Related