ರಾಕಿಭಾಯ್‌ ಟೆಂಪಲ್ ರನ್

ರಾಕಿಭಾಯ್‌ ಟೆಂಪಲ್ ರನ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೇವಲ ರಾಜ್ಯ ಮಾತ್ರವಲ್ಲದೆ ಇಡೀ ದೇಶದಾದ್ಯಂತ ಕೆಜಿಎಫ್ ಚಿತ್ರದ ಮೂಲಕ ಹೆಸರು ಮಾಡಿರುವ ಅವರು ಇದೀಗ ಹಲವಾರು ಪ್ರಾಜೆಕ್ಟ್ ಗಳ ಮೂಲಕ ಇನ್ನಷ್ಟು ಅಭಿಮಾನಿಗಳ ಮನೆಗೆಲ್ಲಲು ಸಜ್ಜಾಗಿದ್ದಾರೆ.

ಹೌದು, ರಾಕಿಂಗ್ ಸ್ಟಾರ್ ಯಶ್ ಅವರು ಕೆ ಜಿ ಎಫ್ ಚಿತ್ರದ ಮೂಲಕ ಹೆಚ್ಚು ಮಾನ್ಯತೆ ಪಡೆದಿರುವ ಅವರು ರಾಮಾಯಣ 2 ಸಿನಿಮಾದ ನಟಿಸಲಿದ್ದಾರೆ. ಇನ್ನು ರಾಮಾಯಣ 2 ಸಿನಿಮಾದ ಚಿತ್ರೀಕರಣಕ್ಕೂ ಮುನ್ನ ದೇವರ ಮೋರೆ ಹೋಗಿದ್ದಾರೆ.

ನಟ ಯಶ್ ಕುಲದೇವರಾದ ಉಜ್ಜನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶಿವನ ಆಶೀರ್ವಾದ ಪಡೆದಿದ್ದಾರೆ.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿವ ನಮ್ಮ ಕುಲದೇವರು. ನಾನು ಚಿಕ್ಕಂದಿನಿಂದಲೂ ಶಿವನನ್ನು ಆರಾಧಿಸುತ್ತೇನೆ. ಹಾಗಾಗಿ ಶಿವನ ಆಶೀರ್ವಾದ ಪಡೆಯಲು ನಾನಿಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಲಾಮರ್ ಗೊಂಬೆಯಂತೆ ಕಾಣುತ್ತಿರುವ ಮೇಘಾ ಶೆಟ್ಟಿ!

ಇನ್ನು ಯಶ್‌ ರವರು ತಮ್ಮ ಬ್ಯಾನರ್, ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಮಲ್ಹೋಟಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ನಿರ್ಮಾಣದ ಜೊತೆಗೆ ರಾವಣಾಸುರನಾಗಿ ಗಹಗಹಿಸಲಿದ್ದಾರೆ. ಅದಕ್ಕೂ ಮುನ್ನ ಶಿವನಿಗೆ ನಮಿಸಿದ್ದಾರೆ.

 

Related