ಸೇಡಿಗೆ ಸೇಡು, ಖಾಕಿ ಬೇಟೆ, ನೆತ್ತರು ಹರಿಸಿದ ಹಂತಕರು ಜೈಲಿಗೆ

ಸೇಡಿಗೆ ಸೇಡು, ಖಾಕಿ ಬೇಟೆ, ನೆತ್ತರು ಹರಿಸಿದ ಹಂತಕರು ಜೈಲಿಗೆ

ಶಹಾಪುರ: ರೌಡಿಶೀಟರ್ ಸಣ್ಣಮಾಪಣ್ಣ ತಂದೆ ಭೀಮಪ್ಪ ಬಡಿಗೇರ (48) ನ ಕೊಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ 3 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಗುರುವಾರ ಯಾದಗಿರಿ ಜೈಲಿಗೆ ಕಳುಹಿಸಿದರು.

ಎ-2 ಆರೋಪಿ ಹುಸೇನಿ ತಂದೆ ಚಂದಾಸಾಬ್ ಪಟೇಲ್(37), ಶಿವಪ್ಪಗೌಡ ಮಳಗೊಂಡ ಅರಳಳ್ಳಿ(55), ಮಹ್ಮದ್ ರೀಯಾಜ್ ಗೋಗಿ (35) ಬಂಧಿತ ಆರೋಪಿಗಳಾಗಿದ್ದಾರೆ. ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ. ಹಳೆಯ ದ್ವೇಷ ಇಟ್ಟುಕೊಂಡು ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಡಿಎಸ್‌ಪಿ ಜಾವೇದ ಇನಾಂದಾರ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರಗೊಂದಿಗೆ ಮಾತನಾಡಿ ಮಾರ್ಚ್ 16 ರಂದು ರೌಢಿಶೀಟರ್ ಮಾಪಣ್ಣನನ್ನು ಹಾಡುಹಗಲೇ ಹತ್ಯೆಗೈಯಲಾಗಿತ್ತು. ಈ ಘಟನೆ ಇಡೀ ಶಹಾಪುರೆ ಬೆಚ್ಚಿಬಿದ್ದಿತ್ತು. ಕಾರ್‌ನಲ್ಲಿ ಬಂದಿದ್ದ ರಕ್ಕಸರು ಮಾಪಣ್ಣನ ಮೇಲೆ ಅಟ್ಯಾಕ್ ಮಾಡಿ ಬರೋಬ್ಬರಿ  ಚಾಕುನಿಂದ 10 ಬಾರಿ ಇರಿದು ಹತ್ಯೆಗೈದಿದ್ದರು. ಭೀಕರ ಹತ್ಯೆಯ ಹಂತಕರನ್ನು ಪೊಲೀಸರು ಬೇಟೆ ಆಡಿದ್ದಾರೆ. ಇದನ್ನೂ ಓದಿ: ಮಾಪಣ್ಣನ ಕಗ್ಗೊಲೆ, ಹಂತಕರ ಭೇಟೆಗೆ ಖಾಕಿ ತೀವ್ರ ಶೋಧ

ಘಟನೆ ವಿವರ

ಆರೋಪಿ ಹುಸೇನ್ ಪಟೇಲ್ ಮತ್ತು ಶಿವಪ್ಪಗೌಡ ಇಬ್ಬರಿಗೂ ಸ್ನೇಹವಿದ್ದು, ಮೃತ ಮಾಪಣ್ಣ ಮತ್ತು ಆತನ ಮಕ್ಕಳು ನಿತ್ಯ ಹುಸೇನಿನ ದಾಬಾಗೆ ಹೋಗಿ ಕಿರಿಕಿರಿ ಮಾಡುತ್ತಿದ್ದು ಹೀಗೆ ಸಹಿಸಿಕೊಂಡು ಬಂದಿದ್ದು ಒಂದು ತಿಂಗಳಿನಿಂದ ಅವಕಾಶಕ್ಕಾಗಿ ಕಾದು, ಸ್ಕೇಚ್ ಹಾಕಿ ಸಿಸಿಟಿವಿ ಇರದ ಜಾಗ ನೋಡಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೊರ್ವ ಆರೋಪಿ ಶಿವನಗೌಡ ಅರಳಳ್ಳಿ ಮತ್ತು ಮಾಪಣ್ಣನ ನಡುವೆ ಒಳಜಗಳವಿದ್ದು ಶಿವನಗೌಡ ಮನೆಯ ನ್ಯಾಯ ಪಂಚಾಯಿತಿ ಮಾಡಿ ಮಾಪಣ್ಣನು ಆಸ್ತಿ ಲಪಾಟಯಿಸಿದ್ದು ಅಲ್ಲಿಂದಲೆ ಮಾಪಣ್ಣ ಮತ್ತು ಶಿವಣಗೌಡ ನಡುವೆ ದ್ವೇಷ ಶುರುವಾಗಿತ್ತು ಎಂದು ಆರೋಪಿ ಬಾಯಿಬಿಟ್ಟಿದ್ದಾರೆ. 2009 ರಲ್ಲಿ ಮಾಪಣ್ಣ ಮತ್ತು ಅವನ ಮನೆಯವರು ಸೇರಿಕೊಂಡು ಹುಸೇನಿಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆಬಡೆ ಮಾಡಿರುತ್ತಾರೆ. ಮತ್ತು ಆರೋಪಿ ಶಿವಣ್ಣಗೌಡ ಮೇಲೆಯು ಸಹ ಮಾಪಣ್ಣ ಹೊಡೆಬಡೆ ಮಾಡಿದ್ದು ಇಬ್ಬರಿಗೂ ದ್ವೇಷ ಬೆಳೆದಿದೆ.

ಮತ್ತೊರ್ವ ಆರೋಪಿ ರಿಯಾಜ್‌ನು ಮತ್ತು ಈ 3 ಜನ ಆರೋಪಿಗಳು ಸೇರಿಕೊಂಡು ಮಾಪಣ್ಣನ ಆಗು ಹೋಗುಗಳು, ಚಲನ ವಲನ ತಿಳಿದುಕೊಂಡು ಪ್ರತಿ ಭಾನುವಾರ ಭೀಮರಾಯನಗುಡಿಗೆ ತರಕಾರಿ ತರಲು ಬರುತ್ತಿದ್ದು ಇದನ್ನು ಖಚಿತಪಡಿಸಿಕೊಂಡ ಹಂತಕರು ಸಾದ್ಯಾಪುರ ಬ್ರಿಡ್ಜ್ ದಾಟಿದ ನಂತರ ಹಿಂಭಾಲಿಸಿ ಕಾರಿನಿಂದ ಮೋಟಾರ್ ಸೈಕಲ್ ಡಿಕ್ಕಿಪಡಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು, ತಲವಾರ ಚಾಕುವಿನಿಂದ ಹೊಡೆದು ಕೊಲೆ ಮಾಡಿಲಾಗಿದೆ ಎಂದು ತನಿಖೆ ವೇಳೆ ಆರೋಪಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಣ ಉಳಿಸಿಕೊಳ್ಳಲು ಮಾಪಣ್ಣ ಹರಸಾಹಸ

ಮೃತ ರೌಡಿಶೀಟರ್ ಮಾಪಣ್ಣನಿಗೆ ಆರೋಪಿಗಳು ಮೊದಲು ಕಾರಪುಡಿ ಎರಚಿದ್ದು ನಂತರ ತಲವಾರ್ ಮತ್ತು ಚಾಕುನಿಂದ 10 ಬಾರಿ ಇರಿದು ಕೊಚ್ಚಿದ್ದು ಆದರೂ ಸಹ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದು, ಅದೇ ಹೆದ್ದಾರಿ ರಸ್ತೆಗೆ ಖಾಸಗಿ ವಾಹನವೊಂದು ಬಂದು ಅಡ್ಡಗಟ್ಟಿ ಮೃತ ಮಾಪಣ್ಣ ವಾಹನಕ್ಕೆ ಜೋತು ಬಿದ್ದಿದ್ದಾನೆ ನಂತರ ಆರೋಪಿಗಳು ವಾಹನ ಚಾಲಕನಿಗೆ ಬೆದರಿಸಿದ ನಂತರ ರೋಡಿಗೆ ಹಾಕಿ ತಲವಾರ್‌ನಿಂದ ತಲೆಗೆ ಹೊಡೆದಿದ್ದು ಸ್ಥಳದಲ್ಲೆ ಮೃತಪಟ್ಟ ಬಳಿಕ ಆರೋಪಿಗಳು ಅಲ್ಲಿಂದ ಓಡಿ ಹೊಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ಆರೋಪಿಗಳಿಗಾಗಿ ಶೋಧಕಾರ್ಯ

ಮಾಪಣ್ಣ ಕೊಲೆಗೆ ಸಂಭಂಧಪಟ್ಟಂತೆ ಸದರಿ ಪ್ರಕರಣ ತನಿಖಾ ಹಂತದಲ್ಲಿದ್ದು ಇನ್ನಷ್ಟು ಆರೋಪಿಗಳ ಶೋಧಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Related