ನೀರಿಗೆ ಮೀಟರ್ ಅಳವಡಿಕೆಗೆ ವಿರೋಧ

ನೀರಿಗೆ ಮೀಟರ್ ಅಳವಡಿಕೆಗೆ ವಿರೋಧ

ಧಾರವಾಡ: ಕುಡಿಯುವ ನೀರು ಮಾರಾಟದ ವಸ್ತುವಲ್ಲ, ‘ಕುಡಿಯುವ ನೀರಿಗೆ ಮೀಟರ್ ಅಳವಡಿಕೆಯನ್ನು ಖಂಡಿಸಿ’, ಧಾರವಾಡ ತಾಲೂಕಿನ ತೆಗೂರುನಲ್ಲಿ ಆರ್.ಕೆ.ಎಸ್ ಸಂಘಟನೆ ಹಾಗು ರೈತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತೆಗೂರ ಪಂಚಾಯಿತಿಯ ಮುಂದೆ ನೂರಾರು ರೈತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದ್ದಾರೆ. ಪ್ರತಿಭಟನೆಯಲ್ಲಿ ಪುರುಷರ ಜೊತೆ ಮಹಿಳೆಯರು ಭಾಗವಹಿಸಿದ್ದರು.

ಕೋವಿಡ್ ಹಿನ್ನಲೆ, ದೇಶದ ಆರ್ಥಿಕ ಪರಿಸ್ಥಿತಿ ಕುಗ್ಗಿರುವಾಗ ನಮ್ಮನ್ನಾಳುವ ಸರ್ಕಾರ ಜನಪರ ಕಾರ್ಯಕ್ರಮ ರೂಪಿಸುವುದು ಬಿಟ್ಟು, ತೆರಿಗೆ ಏರಿಸಿರುವುದು, ಬೆಲೆ ಏರಿಕೆ ಮಾಡುತ್ತಿರುವುದು ಜನ ವಿರೋಧಿ ದೋರಣೆಯಾಗಿದೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕರರು ಗುಡಗಿದರು.

Related