ಪೊಲೀಸರಿಗೆ ಬೇಗ ಮುಂಬಡ್ತಿ ಕೊಡಿ

ಪೊಲೀಸರಿಗೆ ಬೇಗ ಮುಂಬಡ್ತಿ ಕೊಡಿ

ಬೆಂಗಳೂರು : ಎಎಸ್‌ಐ ಹುದ್ದೆಯಿಂದ ಪಿಎಸ್‌ಐ ಹುದ್ದೆಗೆ ಬಡ್ತಿ ಸೇವಾವಧಿಯನ್ನು 5 ವರ್ಷಕ್ಕೆ ಬದಲಾಗಿ 3 ವರ್ಷಕ್ಕೆ ಇಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೋಮವಾರ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ‘ಕಳೆದ 2003 ರಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಲಾಗುತ್ತಿದೆ. ಶೇ.75ರಷ್ಟು ಮಂದಿ ಪದವೀಧರರಾಗಿದ್ದು, ಇಲಾಖೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದರೂ ಮುಂಬಡ್ತಿ ದೊರೆಯದೆ ಒಂದೇ ಹುದ್ದೆಯಲ್ಲಿ ಇರುವಂತಾಗಿದೆ. ಸಿಬ್ಬಂದಿಗಳಲ್ಲಿ ಆತ್ಮಸ್ಥೈರ್ಯ,  ದಕ್ಷತೆ ಇಳಿಮುಖವಾಗುತ್ತಿದೆ. ವಯೋ ನಿವೃತ್ತಿ ವೇಳೆಗೆ ಕಾನ್ಸ್ಟೇಬಲ್ ಹುದ್ದೆಯಿಂದ ಪಿಎಸ್‌ಐ ಹುದ್ದೆಗೆ ಮುಂಬಡ್ತಿ ಸಿಗುವುದರಿಂದ ಇಲಾಖೆಯಲ್ಲಿ ಉತ್ತಮ ಕೆಲಸಗಳು, ದಕ್ಷತೆ ಹೆಚ್ಚಾಗಿ ಇಲಾಖೆಯ ಗೌರವವೂ ಹೆಚ್ಚಾಗಲಿದೆ’ ಎಂದು ಮನವಿ ಮಾಡಿದರು.

Related