ಪ್ರತಾಪ್ ಸಿಂಹ ಏನ್ ಮಾಡಿದ್ದಾರೆಂದು ಚರ್ಚೆಗೆ ಬರಲಿ – ಸಿದ್ದು ಸವಾಲ್

ಪ್ರತಾಪ್ ಸಿಂಹ ಏನ್ ಮಾಡಿದ್ದಾರೆಂದು ಚರ್ಚೆಗೆ ಬರಲಿ – ಸಿದ್ದು ಸವಾಲ್

ಮೈಸೂರು ಜೂ 15 : ಅಭಿವೃದ್ದಿ ಕಾರ್ಯದ ಬಗ್ಗೆ ಕಾಂಗ್ರೆಸ್ ನಾಯಕರು ಸಂಸದರನ್ನು ಬಹಿರಂಗ ಚರ್ಚೆಗೆ ಕರೆದ ವಿಚಾರವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಸಿದ್ದರಾಮಯ್ಯ ಮತ್ತು ಡಾ. ಹೆಚ್.ಸಿ ಮಹದೇವಪ್ಪ ಯಾವುದೇ ಸಂಧರ್ಭದಲ್ಲಿ ನನ್ನನ್ನು ಚರ್ಚೆಗೆ ಕರೆಯಲಿ . ನಾನು ಚರ್ಚೆಗೆ ಸಿದ್ದ. ಅವರು ದಂಡು ದಾಳಿ ಸಮೇತ ಬರಲಿ. ನಾನು ಒಬ್ಬನೇ ಬರುತ್ತೇನೆ. 48 ಗಂಟೆ ಮುಂಚಿತವಾಗಿ ನನಗೆ ಸ್ಥಳ ಸಮಯ ತಿಳಿಸಿದರೆ ಸಾಕು. ನಾನು ಚರ್ಚೆಗೆ ಸಿದ್ದ ಎಂದಿದ್ದಾರೆ

ಇನ್ನು ನೀವು ಚರ್ಚೆಗೆ ಬರುವುದು ಬಿಟ್ಟು, ಗ್ರಾಮ ಪಂಚಾಯಿತಿ ಗೆಲ್ಲದ ವಕ್ತಾರರನ್ನು ಕಳುಹಿಸುತ್ತೇನೆಂದರೆ ಹೇಗೆ..? ನನ್ನ ಜೊತೆ ಚರ್ಚೆ ಮಾಡಲು ನಿಮಗೆ ಬಾಯಿ ಬಿದ್ದು ಹೋಗಿದೆಯಾ..? ವೇದಿಕೆಗಳಲ್ಲಿ ಗಂಟೆ ಗಂಟೆಲೇ ಪುಂಖಾನುಪುಂಖ ಭಾಷಣ ಮಾಡುತ್ತೀರಾ..? ಖಾಲಿಕುಳಿತಿರುವ ಮಹದೇವಪ್ಪ ಫೇಸ್​ಬುಕ್ ನಲ್ಲಿ ಉದದ್ದ ಪೋಸ್ಟರ್ ಹಾಕುತ್ತಾರೆ. ನನ್ನ ಜೊತೆ ಚರ್ಚೆಗೆ ಬರಲು ಏನು ಕಷ್ಟ. ಜಯ, ವಿಜಯರ ಥರ ನೀವು ಮೈಸೂರು ಭಾಗದಲ್ಲಿದೀರಾ. ನನ್ನ ಜೊತೆ ಚರ್ಚೆ ಮಾಡಲು ನಿಮಗೆ ನಮ್ಮ ಅಹಂ ಅಡ್ಡ ಬರುತ್ತಿದ್ದೇಯಾ..? ಅಥವಾ ನನ್ನ ಜೊತೆ ಚರ್ಚೆಗೆ ಭಯನಾ..? ಎಂದು ಲೇವಡಿ ಮಾಡಿದ್ದಾರೆ.

ಮೈಸೂರಿಗೆ ಬಾಡೂಟಕ್ಕೆ, ಬೀಗರ ಊಟಕ್ಕೆ ವಾರಕ್ಕೆ ಎರಡು ಬಾರಿ ಸಿದ್ದರಾಮಯ್ಯ ಬರುತ್ತಾರೆ. ಅದೇ ಸಮಯದಲ್ಲಿ ಅರ್ಧ ಗಂಟೆ ಬಿಡುವು ಮಾಡಿಕೊಂಡು ಚರ್ಚೆಗೆ ಬನ್ನಿ. ಪಾಯಿಂಟು ಪಾಯಿಂಟ್ ಚರ್ಚೆ ಮಾಡುತ್ತೇನೆ ಬನ್ನಿ. ನೀವು ವಕ್ತಾರರನ್ನು ಚರ್ಚೆಗೆ ಕಳುಹಿಸುವುದಾದರೇ ನಾನು ನಮ್ಮ ಪಕ್ಷದ ತಾಲೂಕು ವಕ್ತಾರರನ್ನೇ ನಾನು ಕಳುಹಿಸುತ್ತೇನೆ ಎಂದಿದ್ದಾರೆ.

Related