ಬೆಂಗಳೂರು: ಕಾಂಗ್ರೆಸ್ ನಾಯಕರ ಅಪಕ್ವ ಹೇಳಿಕೆಗಳಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೆಲವರ ಪ್ರಶ್ನೆಗಳು ಪಾಕಿಸ್ತಾನದ ಪರವಾಗಿವೆ. ನಿನ್ನೆ ತಾನೇ ಮೂವರು ಸತ್ತು ಬಿದ್ದರಲ್ಲವೇ? ನಿಮಗೆ ಕಣ್ಣು ಕಾಣಲಿಲ್ಲವೇ ಎಂದು ಕೇಳಿದರು. ನಿಮಗೇನಾದರೂ ಆಪರೇಷನ್ ಆಗಿದೆಯೇ? ನಿಮಗೆಲ್ಲ ವಿಶೇಷ ಆಸ್ಪತ್ರೆ ತೆರೆಯಬೇಕಿದೆ ಎಂದು ವ್ಯಂಗ್ಯವಾಡಿದರು. ಅವರ ಸ್ಥಾನದಲ್ಲಿ ನಾನು ಇದ್ದರೆ ಪಕ್ವತೆ ಇಲ್ಲದ ಪ್ರಶ್ನೆ ಕೇಳುತ್ತಿರಲಿಲ್ಲ ಎಂದರು. ಇದನ್ನೂ ಓದಿ: ವೀರಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ತಿರಂಗ ಯಾತ್ರೆ
ದೇಶದ ವಿರುದ್ಧ ಮಾತನಾಡಿದರೆ ಜನರು ನಿಮ್ಮ ನಾಲಿಗೆ ಇಲ್ಲದಂತೆ ಮಾಡಬಹುದು ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.