ಮೈಸೂರು ಅಭಿವೃದ್ಧಿ ವಿಚಾರವಾಗಿ ಖುರ್ಚಿ ಸಮೇತ ಹೊರಟ ಕಾಂಗ್ರೆಸ್ ಮುಖಂಡರ..

ಮೈಸೂರು ಅಭಿವೃದ್ಧಿ ವಿಚಾರವಾಗಿ ಖುರ್ಚಿ ಸಮೇತ ಹೊರಟ ಕಾಂಗ್ರೆಸ್ ಮುಖಂಡರ..

ಮೈಸೂರು, ಜೂ 29 : ಮೈಸೂರು ಅಭಿವೃದ್ಧಿ ವಿಚಾರವಾಗಿ ಸಂಸದ ಪ್ರತಾಪ್​ ಸಿಂಹ ಇಂದು ಕಾಂಗ್ರೆಸ್ ಮುಖಂಡರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಪ್ರತಾಪ್​ ಸಿಂಹ ಬಹಿರಂಗ ಚರ್ಚೆಯ ಆಹ್ವಾನ ಸ್ವೀಕರಿಸುವ ಕಾಂಗ್ರೆಸ್​ ನಾಯಕರು ಮೇಜು, ಕುರ್ಚಿ ಸಮೇತ  ಸಂಸದರ ಕಚೇರಿಯತ್ತ ಹೊರಟಿದ್ದಾರೆ.

ಕಾಂಗ್ರೆಸ್, ​ ಸಂಸದರೊಂದಿನ ಸಂವಾದಕ್ಕಾಗಿ ತೆರೆದ ವಾಹನದಲ್ಲಿ ವೇದಿಕೆ ಸಜ್ಜುಗೊಳಿಸಿದ್ದು, ಜಿಲ್ಲಾ ಕಾಂಗ್ರೆಸ್​ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನ ಕಾಂಗ್ರೆಸ್ ಕಚೇರಿಯಿಂದ ಪ್ರತಾಪ್ ಸಿಂಹ ಕಚೇರಿಯತ್ತ ಮೆರವಣಿಗೆ ಹೊರಟಿದ್ದಾರೆ.

ಇನ್ನು ಕೆಲವೇ ಸಮಯದಲ್ಲಿ ಕಾಂಗ್ರೆಸ್​ ನಾಯಕರು ಪ್ರತಾಪ್ ಸಿಂಹ ಕಚೇರಿ ತಲುಪಲಿದ್ದು, ಬಳಿಕ ಬಹು ನಿರೀಕ್ಷೆಯ ಮೈಸೂರು ಅಭಿವೃದ್ಧಿ ಬಹಿರಂಗ ಚರ್ಚೆ ಆರಂಭವಾಗಲಿದೆ.

Related