ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆ..!!

  • In Crime
  • July 5, 2022
  • 735 Views
ಚಂದ್ರಶೇಖರ್ ಗುರೂಜಿಯ ಬರ್ಬರ ಹತ್ಯೆ..!!

ಹುಬ್ಬಳ್ಳಿ ,ಜು 05 : ರಾಜ್ಯದ ಪ್ರಸಿದ್ಧ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಕೊಲೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಾಡಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹುಬ್ಬಳ್ಳಿ ಉಣಕಲ್ ನಲ್ಲಿರುವ ಖಾಸಗಿ ಹೊಟೆಲ್ ನಲ್ಲಿ ಹತ್ಯೆ ನಡೆದಿದೆ.  ಹೋಟೆಲ್ ರಿಸ್ಪಷನ್ ನಲ್ಲಿ ಹತ್ಯೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚಂದ್ರಶೇಖರ್ ಗುರೂಜಿ ಅವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇವರ ಸರಳವಾಸ್ತು ಮೂಲಕ ಖ್ಯಾತಿ ಪಡೆದಿದ್ದರು. ಚಂದ್ರಶೇಖರ್​ ದೇಶ-ವಿದೇಶದಲ್ಲಿ ವಾಸ್ತು ಕಾರ್ಯಕ್ರಮ ಮಾಡುತ್ತಿದ್ದರು. ಹೋಟೆಲ್​​​​​​ಗೆ ಕಮಿಷನರ್​​ ಲಾಬೂರಾಮ್​​ ದೌಡಾಯಿಸಿದ್ಧಾರೆ. ಭಕ್ತರ ವೇಷದಲ್ಲಿ ಬಂದು ಚೂರಿ ಇರಿದಿರುವ ಮಾಹಿತಿ ಲಭ್ಯವಾಗಿದೆ.

Related