ಸಂತೋಷ್‌ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆಶಿ

ಸಂತೋಷ್‌ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆಶಿ

ಕಾರವಾರ : ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್‌ಗೆ ಎಂಎಲ್‌ಸಿ ಹಾಗೂ ಮಿನಿಸ್ಟರ್ ಒಬ್ಬರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ  ಡಿ.ಕೆ. ಶಿವಕುಮಾರ್ ಆರೋಪಿಸಿದರು.

ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕಾರ್ಯದರ್ಶಿ ಎನ್.ಆರ್ ಸಂತೋಷ್ ಅವರ ಪರ್ಸನಲ್ ವಿಡಿಯೋ ಮಾಡಿ ಎಂಎಲ್‌ಸಿ ಹಾಗೂ ಒಬ್ಬರು ಮಿನಿಸ್ಟರ್‌ಗೆ ನೀಡಿದ್ದರು.

ಈ ವೈಯಕ್ತಿಕ ವಿಡಿಯೋದಲ್ಲಿ ಯಾವುದೋ ಗೌಪ್ಯ ವಿಚಾರ ಅಡಗಿದೆ. ವಿಡಿಯೋ ತೆಗೆದುಕೊಂಡಿದ್ದವರು ಸಿಎಂ ಮತ್ತು ಅವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

Related