ಗ್ಯಾನವಾಪಿ ಮಸೀದಿ ಪ್ರಕರಣ ; ನಟ ಅಕ್ಷಯ್ ಹೇಳಿದ್ದೇನು ಗೊತ್ತಾ..?

ಗ್ಯಾನವಾಪಿ ಮಸೀದಿ ಪ್ರಕರಣ ; ನಟ ಅಕ್ಷಯ್ ಹೇಳಿದ್ದೇನು ಗೊತ್ತಾ..?

ಗ್ಯಾನವಾಪಿ ಮಸೀದಿ ಪ್ರಕರಣ ದೇಶವ್ಯಾಪಿ ಚರ್ಚೆಯಾಗುತ್ತಿದೆ. ವಾರಾಣಸಿಯಲ್ಲಿ ಇತ್ತೀಚಿಗಷ್ಟೆ ಶಿವಲಿಂಗ ರೀತಿಯ ಆಕೃತಿ ಪತ್ತೆಯಾದ ಬಳಿಕ ದೇಶದ ಗಮನ ಗ್ಯಾನವಾಪಿ ಕಡೆ ತಿರುಗಿದೆ. ಮಸೀದಿಯೊಳಗೆ ಪತ್ತೆಯಾದ ಶಿವಲಿಂಗ ಕಪ್ಪುಕಲ್ಲಿನಿಂದ ನಿರ್ಮಾಣ ಮಾಡಿದ್ದಾಗಿದ್ದು, ಅದರ ಗುಮ್ಮಟದ ಮೇಲೆ ರಂಧ್ರ ಕೊರೆದು ಕಾರಂಜಿಯಾಗಿ ಪರಿವರ್ತಿಸುವ ಯತ್ನ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಬಿಡುಗಡೆ ತಯಾರಿಯಲ್ಲಿರುವ ಅಕ್ಷಯ್ ಕುಮಾರ್ ಗ್ಯಾನವಾಪಿ ವಿವಾದದ ಬಗ್ಗೆ ಮಾತನಾಡಿದ್ದಾರೆ.

ನವ್ಭಾರತ ಟೈಮ್ಸ್ ಜೊತೆ ಮಾತನಾಡಿದ ಅಕ್ಷಯ್ ಕುಮಾರ್, ‘ಸರ್ಕಾರ, ಭಾರತದ ಪುರಾತತ್ವ ಇಲಾಖೆ ಮತ್ತು ನ್ಯಾಯಾಧೀಶರು ಸದ್ಯ ಸಿಕ್ಕಿರುವ ಸಾಕ್ಷಾಧಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ವಿಡಿಯೋದಲ್ಲಿ ಕಾಣುತ್ತಿರುವುದು ಶಿವಲಿಂಗದಂತೆಯೇ ಇದೆ. ಆದರೆ ನಮಗೆ ವಿಡಿಯೋದಲ್ಲಿ ಕಾಣುತ್ತಿರುವುದು ಶಿವಲಿಂಗ ಹೌದಾ ಅಥವಾ ಅಲ್ಲವಾ ಎಂಬ ನಿರ್ಧಾರ ತೆಗೆದುಕೊಳ್ಳುವಷ್ಟು ತಿಳಿವಳಿಕೆ ಇಲ್ಲ’ ಎಂದಿದ್ದಾರೆ.

Related