ಮ್ಯಾರಾಥಾನ್ ಓಟದ ಸ್ಪರ್ಧೆ

ಮ್ಯಾರಾಥಾನ್ ಓಟದ ಸ್ಪರ್ಧೆ

ಚಿಕ್ಕೋಡಿ, ಫೆ. 20: ನಿಪ್ಪಾಣಿ ಪಟ್ಟಣದಲ್ಲಿ  ಮಹಾಶಿವರಾತ್ರಿ ನಿಮಿತ್ಯ ಮಾಹಾದೇವ ಮಂದಿರದ ಜಾತ್ರಾ ಕಮಿಟಿಯವರು ಮೆರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದು, ಈ ಮ್ಯಾರಥಾನ್ ಓಟದ ಸ್ಪರ್ಧೆ ಪಟ್ಟಣದ ಮಹಾದೇವ ಮಂದಿರದಿಂದ ನಿಪ್ಪಾಣಿ ಪಟ್ಟಣದ ಪಿಎಸ್ಐ ಬಿ.ಜಿ.ಸುಬ್ಬಾಪುರಮಠ ಕಾಯಿ ವಡೆದು ಕೇಸರಿ ನಿಶಾನೆ ತೋರಿಸುವುದರ ಮೂಲಕ ಈ ಸ್ಪರ್ಧೆಗೆ ಚಾಲನೆ ನೀಡಿದರು .

ಈ ಸ್ಪರ್ಧೆಯಲ್ಲಿ 30 ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. 21 ಕೀ/ಮೀ  ಓಡಿ ಜಯಗಳಿಸಿದ ಸ್ಪರ್ಧಾಳುಗಳು.

ನಿಪ್ಪಾಣಿ ಪಟ್ಟಣದ ಮಹಾದೇವ ಮಂದಿರ ಯಾತ್ರಾ ಸಮಿತಿಯವರು ಪ್ರಥಮ ಸ್ಥಾನ ಪಡೆದ ಪರಸರಾಮ.ಬೋಯಿ, ದ್ವೀತಿಯ ಸ್ಥಾನ ಪಡೆದ  ಪ್ರವೀಣ. ಕಾಂಬಳೆ,ಮೂರನೇ  ಸ್ಥಾನ ಪಡೆದ ತುಶಾರ.ಪಾಟೀಲ, ಹೀಗೆ ಒಟ್ಟು 5 ಜನ ವಿಜೆತರಿಗೆ ನಗದು, ಮತ್ತು ಪ್ರಶಸ್ತಿ ಪತ್ರವನ್ನು ಗಣ್ಯರಾದ ಅಮರ. ಬಾಗೆವಾಡಿ, ಸುನೀಲ,ಪಾಟೀಲ, ಎಸ್.ಸಿ.ಗಡಕರಿ, ಆನಂದ ಪನದೆ, ನಿಪ್ಪಾಣಿಯ ಪಿಎಸ್ಐ  ಬಿ.ಜಿ.ಸುಬ್ಬಾಪುರಮಠ ಈ ಗಣ್ಯರಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮ ದಲ್ಲಿ ಸಂಜಯ.ಮೊಳವಾಡೆ, ರವಿಂದ್ರ.ಕೋಟಿ ವಾಲೆ, ಲಕ್ಷ್ಮಣ. ಠಗರೆ, ಶಿವಾನಂದ. ದುಮಾಳೆ, ಸಂಜಯ.ವಸೆದಾರ, ರವಿಂದ್ರ, ಚಂದ್ರಕುಡೆ ಉಪಸ್ಥಿತಿ ಇದ್ದರು.

Related