ಕೆ.ವೆಂಕಟೇಶ್ ಗೆ ಸಚಿವ ಸ್ಥಾನ -ಪಶುಸಂಗೋಪನೆ

ಕೆ.ವೆಂಕಟೇಶ್ ಗೆ ಸಚಿವ ಸ್ಥಾನ -ಪಶುಸಂಗೋಪನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೆ. ವೆಂಕಟೇಶ್ ಅವರು ಮಂತ್ರಿ ಗಿರಿಯನ್ನು ಗಿಟ್ಟಿಸಿಕೊಂಡಿದ್ದು ಅವರಿಗೆ ಪಶುಸಂಗೋಪನೆ ಇಲಾಖೆಯ ಭಾಗ್ಯ ಒಲಿದು ಬಂದಿದೆ.

ಸಿದ್ದರಾಮಯ್ಯ ಆಪ್ತ ಕೆ.ವೆಂಕಟೇಶ್ ಅವರು ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ 2017ರಿಂದ 2018ರವರೆಗೆ ಬಿಡಿಎ ಅಧ್ಯಕ್ಷರಾಗಿದ್ದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಒಂಬತ್ತು ಚುನಾವಣೆಗಳನ್ನು ಎದುರಿಸಿ 6 ಬಾರಿ ಗೆದ್ದು, ಮೂರು ಬಾರಿ ಸೋತಿದ್ದಾರೆ.

 

Related