ಭಾರತ ಮತ್ತು ಪಾಕಿಸ್ತಾನದ ನಡುವೆ ಬೀಕರ ಸಂಘರ್ಷ ನಡೆಯುತ್ತಿದ್ದು ಇದರ ಪರಿಣಾಮ ಇದೀಗ ಐಪಿಎಲ್ ಟೂರ್ನಿ ಮೇಲೆ ಬಿದ್ದಿದ್ದು, ಈ ಬಾರಿ ನಡೆಯುತ್ತಿರುವ 18ನೆಯ ಸೀಸನ್ ಐಪಿಎಲ್ ಟೂರ್ನಿಯನ್ನು ರದ್ದು ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಇಂದು ನಡೆದ ಮಹತ್ವದ ಸಭೆಯಲ್ಲಿ ಮೊದಲು ದೇಶ ನಂತರ ಕ್ರಿಕೆಟ್ ಎನ್ನುವ ನಿಲುವಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎನ್ನುವ ಮಾಹಿತಿಯನ್ನು ಐಪಿಎಲ್ ಮುಖ್ಯಸ್ಥ ಅರುಣ್ ಧಮಾಲ್ ತಿಳಿಸಿದ್ದಾರೆ.
ಹೌದು, ಈ ಬಾರಿ IPL ಟೂರ್ನಿ ಯಲ್ಲಿ ಆರ್ಸಿಬಿ ತಂಡವು ಮಹತ್ವದ ಪ್ರದರ್ಶನ ಕಾಣುತ್ತಿದ್ದು ಪ್ರತಿ ವರ್ಷವೂ ಈ ಸಲ ಕಪ್ ನಮ್ದೇ… ಈ ಸಲ ಕಪ್ ನಮ್ದೇ… ಎಂದು ಕೂಗುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಈ ಬಾರಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿತ್ತು. ಹೇಗಾದರು ಮಾಡಿ ಈ ಬಾರಿ ಸೇಡನ್ನು ತೀರಿಸಿಕೊಳ್ಳುವ ಪಣತೊಟ್ಟಿರುವ ಆರ್ಸಿಬಿ ಗೆ ನಿರಾಸೆ ಉಂಟಾಗಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತಕ್ಕೆ ದಾಪುಗಾಲಿಡೋ ತವಕದಲ್ಲಿತ್ತು. ಇದನ್ನೂ ಓದಿ: ಐಪಿಎಲ್ ರದ್ದು ಬಗ್ಗೆ ಐಪಿಎಲ್ ಮುಖ್ಯಸ್ಥ ಹೇಳಿದ್ದೇನು?
ಇಂದು ಲಕ್ನೋದಲ್ಲಿ ಆರ್ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ನಿಗಧಿಯಾಗಿತ್ತು. ಆದರೆ ಭಾರತ-ಪಾಕ್ ಸಂಘರ್ಷದ ಮಧ್ಯೆ IPL ಟೂರ್ನಿಯನ್ನು ಬಿಸಿಸಿಐ ಅಮಾನತುಗೊಳಿಸಿದೆ. ಉಳಿದ ಐಪಿಎಲ್ ಪಂದ್ಯಗಳ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ದೇಶದ ಭದ್ರತೆ ಹಾಗೂ ಸೇನೆಗೆ ಗೌರವ ನೀಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಐಪಿಎಲ್ ಹಾಗೂ ಆರ್ಸಿಬಿ ಅಭಿಮಾನಿಗಳಿಗೆ ನಿರಾಸೆ ಕಾದಿದೆ.