ಕನ್ನಡ ರಾಜ್ಯೋತ್ಸವದಂದು ಹಲ್ಮಡಿ ಶಾಸನ ಪ್ರತಿಕೃತಿ ಪ್ರತಿಷ್ಠಾಪನೆ

  • In State
  • October 31, 2024
  • 208 Views
ಕನ್ನಡ ರಾಜ್ಯೋತ್ಸವದಂದು ಹಲ್ಮಡಿ ಶಾಸನ ಪ್ರತಿಕೃತಿ ಪ್ರತಿಷ್ಠಾಪನೆ

ಯಾದಗಿರಿ: ಜಿಲ್ಲಾಡಳಿತದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜರುಗಲಿರುವ ಧ್ವಜಾರೋಹಣ ಹಾಗೂ ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆ 2024ರ ನವೆಂಬರ್ 1ರ ಶುಕ್ರವಾರ ರಂದು ಬೆಳಿಗ್ಗೆ 9 ಗಂಟೆಗೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಹೊಸದಾಗಿ ರೋಡಿಗಿಳಿದ ಐರಾವತ ಕ್ಲಬ್ ಕ್ಲಾಸ್ ಬಸ್

2024ರ ನವೆಂಬರ್ 1ರ ಶುಕ್ರವಾರ ರಂದು ಬೆಳಿಗ್ಗೆ 8.30 “ಕರ್ನಾಟಕ ಸಂಭ್ರಮ 50” ಕನ್ನಡ ಮೊದಲ ಶಾಸನ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಮಾನ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಸಚಿವರಿಂದ ಉದ್ಘಾಟನೆ ನೆರವೇರಿವುದು, ಜಿಲ್ಲಾ ಕ್ರೀಡಾಂಗಣದಲ್ಲಿ ಗಣ್ಯರು, ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಮಾವೇಶಗೊಳ್ಳುವುದು. 2024ರ ನವೆಂಬರ್ 1ರ ಶುಕ್ರವಾರ ರಂದು ಬೆಳಿಗ್ಗೆ 8.55 ಗಂಟೆಗೆ ನಾಡ ದೇವತೆ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಫಲ ಪುಷ್ಪದೊಂದಿಗೆ ಪೂಜೆ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.

 

Related