ಬೆಂಗಳೂರು, ಮಾ. 22: ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಹೆಚ್.ಎಸ್.ಆರ್. ಬಿಡಿಎ ಕಾಂಪ್ಲೇಕ್ಸ್ ಖಾಲಿ ಖಾಲಿ.
ಇನ್ನೂರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರುವ ಸಂಕೀರ್ಣ ಪುಲ್ ಬಂದ್. ಸದಾ ಒಂದಲ್ಲ ಒಂದು ಅಗತ್ಯಕ್ಕೆ ಬರುತಿದ್ದ ಜನ ಇಂದು ಇತ್ತ ತಲೆ ಹಾಕಲಿಲ್ಲ. ಎಲ್ಲಾ ವ್ಯಾಪಾರಿಗಳು ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲ. ಶಾಸಕ ಸತೀಶ್ ರೆಡ್ಡಿ ಮತ್ತು ಸಂಸದ ಎ.ನಾರಾಯಣಸ್ವಾಮಿರವರ ಕಛೇರಿಗಳಿರುವ ವಾಣಿಜ್ಯ ಸಂಕೀರ್ಣ ಬಿಕೋ ಎನ್ನುತಿತ್ತು.