‘ಅನ್ನದಾತ’ರನ್ನು ಸರ್ಕಾರ ಕಡೆಗಣಿಸಿದೆ : ಮಾಜಿ ಸಚಿವ

‘ಅನ್ನದಾತ’ರನ್ನು ಸರ್ಕಾರ ಕಡೆಗಣಿಸಿದೆ : ಮಾಜಿ ಸಚಿವ

ಗದಗ : ಗಣರಾಜ್ಯೋತ್ಸವದಂದು ಅನ್ನದಾತರನ್ನು ಸರ್ಕಾರ ಕಡೆಗಣಿಸಿದೆ ರೈತರ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿದೆ. ಇದು ಘನಘೋರ ಅಪರಾಧ ಎಂಬುದಾಗಿ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ರೈತರ ಪ್ರತಿಭಟನೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಾ ಬರುತ್ತಿದೆ. ಸರ್ಕಾರ ರೈತರ ಹಿತಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದೆ. ಅನ್ನದಾತರನ್ನು ಸರ್ಕಾರ ಕಡೆಗಣಿಸಿದ್ದು ಸರಿಯಲ್ಲ. ರೈತರ ಹೋರಾಟ ಹತ್ತಿಕ್ಕುವ ಕೆಲಸ ಸರ್ಕಾರ ಮಾಡುತ್ತಿರುವುದು ಸರಿಯಲ್ಲ ಎಂದು.

ಅಂದಹಾಗೇ ಗಣರಾಜ್ಯೋತ್ಸವದ ದಿನವಾದ ಇಂದು ದೇಶಾದ್ಯಂತ ರೈತರ ಟ್ರ‍್ಯಾಕ್ಟರ್ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ರೈತರು ಪ್ರತಿಭಟನೆಗೆ ಕರೆ ನೀಡಿದ್ದಾರೆ. ಆದ್ರೇ ಟ್ರ‍್ಯಾಕ್ಟರ್ ಪೆರೇಡ್‌ಗೆ ಅನುಮತಿ ನೀಡಿಲ್ಲ ಎನ್ನುವ ಕಾರಣವೊಡ್ಡಿ ಟ್ರ‍್ಯಾಕ್ಟರ್ ಮೂಲಕ ಪ್ರತಿಭಟನೆ ನಡೆಸಲು ಆಗಮಿಸಿದಂತ ರೈತರ ವಾಹನಗಳನ್ನು ವಶಕ್ಕೆ ಪಡೆದಿದೆ.

Related