ನೆರೆಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಭೇಟಿ

ನೆರೆಪೀಡಿತ ಪ್ರದೇಶಗಳಿಗೆ ಮಾಜಿ ಸಿಎಂ ಭೇಟಿ

ಯಲ್ಲಾಪುರ : ತಾಲೂಕಿನಲ್ಲಿ ಕಳೆದವಾರ ಸುರಿದ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ಪ್ರತಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಳ್ಳಾಪುರ ಭಾಗದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೊಚ್ಚಿ ಹೋದ ಗುಳ್ಳಾಪುರ ಸೇತುವೆಯನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿ, ಪ್ರತಿಪಕ್ಷದ ನಾಯಕನಾಗಿ ರಾಜ್ಯಾದ್ಯಂತ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಲ್ಲ ಕಡೆಯ ಹಾನಿಯ ಮಾಹಿತಿ ಪಡೆದಿದ್ದೇನೆ ಅದನ್ನು ಕ್ರೂಡಿಕರಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದರು.

ಶೀಘ್ರವಾಗಿ ಪರಿಹಾರೋಪಾಯ ನೀಡುವಂತೆ ಸದನದಲ್ಲಿಯೂ ದನಿ ಎತ್ತುತ್ತೇನೆ ಸರ್ಕಾರದ ಗಮನ ಸೆಳೆಯುತ್ತೇನೆ. ಸರ್ಕಾರ ತನ್ನ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿಯೇ ಸಮಯ ವ್ಯರ್ಥ ಮಾಡುತ್ತಿದೆ. ನಮ್ಮ ಸರ್ಕಾರವಿರುವಾಗ ಜನ ನೆಮ್ಮದಿಯಿಂದ ಇದ್ದರು. ಇನ್ನೇರಡು ವರ್ಷ ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಮಾಜಿ ಶಾಸಕ ಸತೀಶ ಸೈಲ್, ಜಿಲ್ಲಾಧ್ಯಕ್ಷ ಭೀಮಣ್ಣಾ ನಾಯ್ಕ, ಪ್ರಮುಖರಾದ ಶಂಭು ಶೆಟ್ಟಿ, ಪ್ರಶಾಂತ ದೇಶಪಾಂಡೆ, ಸುಷ್ಮಾ ರಾಜಗೋಪಾಲ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಿ.ಎನ್ ಗಾಂವ್ಕರ, ರವಿ ನಾಯ್ಕ, ಪ್ರಶಾಂತ ಸಭಾಹಿತ, ಅನಿಲ ವiರಾಠೆ, ಪೂಜಾ ನೇತ್ರೆಕರ ಇನ್ನಿತರರಿದ್ದರು.

Related