ಡಾ. ಎಂ ಸಿ ಸುಧಾಕರ್​ಗೆ ಒಲಿದ ಸಚಿವ ಭಾಗ್ಯ – ವೈದ್ಯಕೀಯ ಇಲಾಖೆ

ಡಾ. ಎಂ ಸಿ ಸುಧಾಕರ್​ಗೆ ಒಲಿದ ಸಚಿವ ಭಾಗ್ಯ – ವೈದ್ಯಕೀಯ ಇಲಾಖೆ

ಚಿಕ್ಕಬಳ್ಳಾಫುರ: ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ ಸಿ ಸುಧಾಕರ್ ಗೆ ಸಚಿವ ಭಾಗ್ಯ ಒಲಿದಿದ್ದು, ಇಂದು ಅವರು ವೈದ್ಯಕೀಯ ಇಲಾಖೆಯ ಪ್ರಮಾಣ ವಚನ ಸ್ವೀಕರಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾವಿ ನಾಯಕ, ಮೂರು ಬಾರಿ ಶಾಸಕ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂಸಿ ಆಂಜನೇಯ ರೆಡ್ಡಿ ಅವರ ಮೊಮ್ಮಗನಾಗಿರುವ ಇವರು, 5 ಬಾರಿ ಶಾಸಕರಾಗಿದ್ದ ಎಂ.ಸಿ ಚೌಡರೆಡ್ಡಿ ಅವರ ಪುತ್ರರಾಗಿದ್ದಾರೆ. ತಾವು ರಾಜಕೀಯ ಪ್ರವೇಶಿಸುವ ಮೂಲಕ ತಮ್ಮ ಕುಟುಂಬದ ರಾಜಕಾರಣದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

Related