ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಬಹುಕೋಟಿಯ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಮಾಡುತ್ತಿದ್ದಾರೆ ಆದರೆ ಬಿಜೆಪಿ ನಾಯಕರುಗಳು ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಈಗಾಗಲೇ ಎಸ್ಐಟಿ ಕೈಯಲ್ಲಿದೆ, ಎಸ್ಐಟಿ ಅಧಿಕಾರಿಗಳು ತನಿಖೆ ಮೇಲೆ ಎಲ್ಲಾ ಆರೋಪಗಳು ಹೊರಬೀಳುತ್ತವೆ. ಯಾರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಕೂಡ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಹೇಳಿದ್ದಾರೆ.ಅ
ಪ್ರಕರಣದ ತನಿಖೆಯನ್ನು ಎಸ್ಐಡಿ ಮತ್ತು ಸಿಬಿಐ ಎರಡು ಏಜೆನ್ಸಿಗಳ ಮಾಡುತ್ತಿದ್ದು ಎರಡು ಆಯಾಮಗಳಲ್ಲಿ ತನಿಖೆ ನಡೆಯತ್ತಿದೆ. ನಿಗಮದ ಹಣಕಾಸಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ರಾಷ್ಟ್ರೀಕೃತ, ಡಿಸಿಸಿ ಮತ್ತು ಸಹಕಾರಿ ಸಂಘಗಳ ದಾಖಲಾತಿಗಳನ್ನು ತನಿಖೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಭಿನಂದನ ಕಾರ್ಯಕ್ರಮದಲ್ಲಿ ಮಧ್ಯ ವಿತರಣೆ; ಕೆ ಸುಧಾಕರ್ ಹೇಳಿದ್ದೇನು: ಕೆ. ಸುಧಾಕರ್
ಎಸ್ಐಟಿ ಅಧಿಕಾರಿಗಳು ಪರಿಶಿಷ್ಟ ಪಂಗಡ ನಿಗಮದ ವ್ಯವಹಾರಗಳ ತನಿಖೆ ನಡೆಸುತ್ತಿದ್ದಾರೆ. ತನಿಖೆ ಜಾರಿಯಲ್ಲಿರುವಾಗಲೇ ಅದು ಸರಿಯಾಗಿ ನಡೆಯುತ್ತಿಲ್ಲ, ಪಾರದರ್ಶಕವಾಗಿಲ್ಲ ಅಂತ ಬಿಜೆಪಿ ನಾಯಕರು ಆಪಾದನೆ ಮಾಡಿದರೆ ಅದಕ್ಕೇನರ್ಥ? ಅವರು ಹೇಳೋದು ಸಿಬಿಐ ಸರಿಯಾಗಿ ತನಿಖೆ ಮಾಡುತ್ತಿಲ್ಲ ಅಂತಲೇ? ಮಾತೆತ್ತಿದರೆ ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಹೇಳುವ ಅವರು ಅದು ನಡೆಸುತ್ತಿರುವ ತನಿಖೆಯ ಮೇಲೆ ಅನುಮಾನ ಪಟ್ಟರೆ ಹೇಗೆ ಎಂದು ಪರಮೇಶ್ವರ್ ಪ್ರಶ್ನಿಸಿದರು, ಪಾರದರ್ಶಕತೆ ಇರಬೇಕೆನ್ನುವ ಕಾರಣಕ್ಕೆ ಅವರು ಜನರ ನಡುವೆ ನಿಂತು ಸಾರ್ವಜನಿಕಾವಾಗಿ ತನಿಖೆ ಮಾಡಲಾಗುತ್ತಾ ಎಂದು ಹೇಳಿದರು.