ಪ್ರತಿನಿತ್ಯ ಸುಳ್ಳನ್ನೇ ಸತ್ಯ ಮಾಡುವ ಸಿ.ಟಿ ರವಿ

ಪ್ರತಿನಿತ್ಯ ಸುಳ್ಳನ್ನೇ ಸತ್ಯ ಮಾಡುವ ಸಿ.ಟಿ ರವಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಬಾಯಿ ತೆರೆದರೆ ಸುಳ್ಳು ಎಂಬುದು ಇಂದು ಮತ್ತೆ ಬಹಿರಂಗವಾಗಿದೆ.

ಧಾರ್ಮಿಕ ಹೆಸರಿನಲ್ಲಿ ರಾಜಕೀಯ ನಡೆಸುವ ಸಿ.ಟಿ.ರವಿ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿ ನಂತರ ನಾನು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಹೇಳಿ ನಂತರ ಮಾಧ್ಯಮಗಳಲ್ಲಿ ದೇವಸ್ಥಾನ ಪ್ರವೇಶಿಸಿರುವುದು ಬಹಿರಂಗವಾದ ನಂತರ ನಾನು ಹೋಗಿದ್ದೆ ಎಂದು ಹೇಳುವ ಇಂತಹ ಒಬ್ಬ ಸುಳ್ಳುಗಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದು ಬಿಜೆಪಿ ಪಕ್ಷದ ಅವನತಿಗೆ ಮೂಲ ಕಾರಣವಾಗಿದೆ.

ಪ್ರತಿನಿತ್ಯ ಸುಳ್ಳನ್ನೇ ಸತ್ಯ ಮಾಡುವ ಪರಿಪಾಠವನ್ನು ಮೈಗೂಡಿಸಿಕೊಂಡಿರುವ ಸಿ.ಟಿ. ರವಿ ತನ್ನ ತಪ್ಪನ್ನ ಮತ್ತೊಬ್ಬರ ಮೇಲೆ ಹೊರೆಸುವ ನಿಸ್ಸೀಮ  ರಾಜಕಾರಣಿ ಅದರಲ್ಲೂ ಬಿಜೆಪಿಗೆ ಇಂತಹ ಸುಳ್ಳುಗಾರನೇ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷ.  ಸಿ.ಟಿ ರವಿ ಧಾರ್ಮಿಕ ಹೆಸರಿನಲ್ಲಿ ನಡೆಸಿದ ಅನಾಚಾರಗಳು ಇಂದು ಬಹಿರಂಗವಾಗಿದೆ.

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸಿ.ಟಿ. ರವಿಯನ್ನ ಇನ್ನು ಮುಂದೆ ಯಾವುದೇ ದೇವಾಲಯಕ್ಕೂ ಪ್ರವೇಶಿಸದಂತೆ ತಡೆಯಬೇಕು. ಕೂಡಲೆ ಮಜರಾಯಿ ಇಲಾಖೆ ಸಿ.ಟಿ. ರವಿ. ನೀಡಿರುವ ಹೇಳಿಕೆ ಸುಳ್ಳಾಗಿರುವುದರಿಂದ ಎಲ್ಲಾ ದೇವಸ್ಥಾನಗಳಲ್ಲಿ ಸಿ.ಟಿ.ರವಿ ಪ್ರವೇಶವನ್ನು ನಿಷೇಧಿಸಬೇಕೆಂದು ಆಗ್ರಹ ಪಡಿಸಲಾಯಿತು.  ಸಿ.ಟಿ ರವಿ ನಲ್ಲಿ ಹೊಟೇಲ್ ಎಂದು ಪ್ರಾರಂಭಿಸಿ ಸಿ.ಟಿ.ರವಿಗೆ ಉಚಿತವಾಗಿ ಮಾಂಸಾಹಾರಿ  ಊಟವನ್ನು ವಿತರಿಸಲಾಯಿತು.

ಈ ಸಂದರಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿಶೇಖರ್. ಎ.ಆನಂದ್. ಬಿ. ಮಂಜುನಾಥ್.ಈ.ಶೇಖರ್. ಉಮೇಶ್. ಪುಟ್ಟರಾಜು. ಪ್ರಶಾಂತ. ಅನಿಲ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Related