ಸಂಪತ್ ರಾಜ್ ನಾಪತ್ತೆ ವಿಚಾರದಲ್ಲಿ ಕಾಂಗ್ರೆಸ್ ಕೈವಾಡ!

ಸಂಪತ್ ರಾಜ್ ನಾಪತ್ತೆ ವಿಚಾರದಲ್ಲಿ ಕಾಂಗ್ರೆಸ್ ಕೈವಾಡ!

ಉಡುಪಿ : ಡಿ.ಜೆ.ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಸಂಪತ್ ರಾಜ್ ನಾಪತ್ತೆ ವಿಚಾರದಲ್ಲಿ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸಂಪತ್ ರಾಜ್ ನಾಪತ್ತೆ ವಿಚಾರದಲ್ಲಿ ಕಾಂಗ್ರೆಸ್  ಕೈವಾಡವಿದೆ.  ಆದರೆ, ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಬಿಜೆಪಿಯು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

ಸಂಪತ್ ರಾಜ್ ವಿರುದ್ಧ ಅಖಂಡ ಶ್ರೀನಿವಾಸ ಮೂರ್ತಿ ಅವರೇ ದೂರು ನೀಡಿದ್ದಾರೆ. ಆದರೆ ಅವರು ನಾಪತ್ತೆಯಾಗಿಲ್ಲ, ಮನೆಯಲ್ಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.  ಡಿ.ಕೆ  ಶಿವಕುಮಾರ್  ಅವರಿಗೆ  ನೈತಿಕತೆ  ಇದ್ದರೆ  ಸಂಪತ್  ರಾಜ್ ಗೆ  ಶರಣಾಗಲು  ಹೇಳಬೇಕಿತ್ತು  ಎಂದರು.

Related