ಮಳೆ ಹೆಚ್ಚು ಬಿದ್ದ ಪರಿಣಾಮ ಚನ್ನಗಿರಿ ತಾಲೂಕಿನ ಹಲವು ಕಡೆ ಬೆಳೆ ನಷ್ಟ, ಮನೆಗಳಿಗೆ ಹಾನಿ,ಜಾನುವಾರು ಸಾವು ಸೇರಿದಂತೆ ಸಂಭವಿಸಿರುವ ಅನಾಹುತಗಳು ಕುರಿತು ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಅವರ ಅಧ್ಯಕ್ಷತೆಯಲ್ಲಿ ದಿಂದ 12-7-2022 ರಂದು ಮಧ್ಯಾಹ್ನ ಚನ್ನಗಿರಿ ತಾಲೂಕು ಪಂಚಾಯತ ಸಭಾಂಗಣದಲ್ಲಿ ಸಭೆ ನಡೆಯಿತು.
ಮಾನ್ಯ ಸಚಿವರು ಮಳೆಯಿಂದಾಗಿ ಬೆಳೆ ಹಾನಿ, ಉಂಟಾಗಿರುವ ನಷ್ಟ ಪರಿಹಾರ ನೀಡುವ ಕುರಿತು ವಿವರಣೆ ಪಡೆದರು ಹಾಗೂ ಸಂತ್ರಸ್ತರಿಗೆ ನೆರವು, ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚನ್ನಗಿರಿ ಶಾಸಕರಾದ ಶ್ರೀ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸಿ ಬಿ ರಿಷ್ಯಂತ, ಚನ್ನಗಿರಿ ಉಪವಿಭಾಗ ಅಧಿಕಾರಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ವರ್ಗದವರು ಇದೆ ವೇಳೆ ಉಪಸ್ಥಿತರಿದ್ದರು.