ಉತ್ತಂಗಿ ಕುಟುಂಬಕ್ಕೆ ಸಾಂತ್ವನ

ಉತ್ತಂಗಿ ಕುಟುಂಬಕ್ಕೆ ಸಾಂತ್ವನ

ಮಹಾಲಿಂಗಪುರ : ಸ್ಥಳೀಯ ದಿನ ಪತ್ರಿಕೆಯ ವರದಿಗಾರರಾದ ನಾರನಗೌಡ ಉತ್ತಂಗಿ ಮತ್ತು ಸ್ಯಾಂಡಲ್‍ವುಡ್ ಖ್ಯಾತ ಚಲನಚಿತ್ರ ನಟ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇಗೌಡ (ಜಿಜಿ) ಅವರ ತಂದೆ ಬಸವನಗೌಡ ನಾರನಗೌಡ ಉತ್ತಂಗಿ (88) ಅವರು ಅನಾರೋಗ್ಯದಿಂದ ನಿಧನರಾದ ಪ್ರಯುಕ್ತ ಮಹಾಲಿಂಗಪುರದ ನಿವಾಸಕ್ಕೆ ಶುಕ್ರವಾರ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ತೇರದಾಳ ಶಾಸಕರಾದ ಸಿದ್ದು ಸವದಿ ಹಾಗೂ ಭಾಜಪ ಮುಖಂಡರು ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಆನಂದ ಕಂಪು, ನಗರ ಘಟಕದ ಅಧ್ಯಕ್ಷ ಶ್ರೀಮಂತ ಹಳ್ಳಿ, ರಾಜ್ಯ ನೇಕಾರ ಪ್ರಕೋಷ್ಠದ ಮಾಜಿ ಅಧ್ಯಕ್ಷ ಮನೋಹರ ಶಿರೋಳ, ಪುರಸಭಾ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ, ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ಮುಖಂಡರಾದ ಶಿವಾನಂದ ಅಂಗಡಿ, ಚನ್ನಪ್ಪ ಪಟ್ಟಣಶೆಟ್ಟಿ, ಭಾಜಪ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ, ಪ್ರಕಾಶ ಮರೇಗುದ್ದಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುವರ್ಣಾ ಆಸಂಗಿ, ಮೀನಾಕ್ಷಿ ಹಿರೇಮಠ, ಮಹಾನಂದ ಮಠಪತಿ, ಬೇಬಿ ಹಟ್ಟಿ ಮತ್ತು ಶಾಸಕರ ಆಪ್ತ ಸಹಾಯಕ ವಿಕ್ರಂ ಕುಳ್ಳೂರ ಮುಂತಾದವರಿದ್ದರು.

Related