ಬೈರಾಗಿ ವೀಕ್ಷಿಸಲು ಶಿವಣ್ಣ ಮನವಿ

ಬೈರಾಗಿ ವೀಕ್ಷಿಸಲು ಶಿವಣ್ಣ ಮನವಿ

ರಾಮನಗರ, ಜೂ 24 : ಬೈರಾಗಿ ಸಿನಿಮಾ ಪ್ರಚಾರಕ್ಕಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಕ್ರವಾರ ರಾಮನಗರಕ್ಕೆ ಆಗಮಿಸಿದ್ದರು. ನಟರಾದ ಡಾಲಿ ಧನಂಜಯ, ಪೃಥ್ವಿ ಅಂಬಾರ್ ಹಾಗು ನಿರ್ಮಾಪಕ ಕೃಷ್ಣ ಸಾರ್ಥಕ್ ಜೊತೆಗಿದ್ದರು.

ಕಾರ್ಯಕ್ರಮದಲ್ಲಿ ‘ಅಪ್ಪು.. ಅಪ್ಪು’ ಎಂದು ಅಭಿಮಾನಿಗಳು ಘೋಷಣೆ ಕೂಗಿದರು. ಆಗ ಶಿವಣ್ಣ ಪ್ರತಿಕ್ರಿಯಿಸಿ, ಪ್ರೀತಿ ಎದೆಯಲ್ಲಿರಬೇಕು, ಬಾಯಲ್ಲಿ ಅಲ್ಲ, ಬಾಯಲ್ಲಿ ತೋರಿಕೆಯಾಗುತ್ತದೆ. ಎದೆಯಲ್ಲಿದ್ದರೆ ಅದು ಭಕ್ತಿ, ಪ್ರೀತಿ, ಮಾನವೀಯತೆ ಆಗಲಿದೆ ಎಂದು ಕಿವಿಮಾತು ಹೇಳಿದರು.

‘ಬೈರಾಗಿ’ ಸಿನಿಮಾ ಜುಲೈ ೧ಕ್ಕೆ ರಿಲೀಸ್ ಆಗ್ತಿದೆ. ಎಲ್ಲರೂ ತಪ್ಪದೇ ಸಿನಿಮಾ ನೋಡಿ ಎಂದು ರಾಮನಗರದ ಐಜೂರು ವೃತ್ತದಲ್ಲಿ ಶಿವಣ್ಣ ಮನವಿ ಮಾಡಿದರು. ಅಭಿಮಾನಿಯೊಬ್ಬರು ತಂದಿದ್ದ ಪುನೀತ್ ಫೋಟೋಗೆ ಅವರು ಸಹಿ ಹಾಕಿ ಕೊಟ್ಟರು.

Related