ಮೈಸೂರು: ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ವರುಣ ವಿಧಾನಸಭಾ ಕ್ಷೇತ್ರ ಎಲ್ಲರ ಗಮನ ಸೆಳೆಯುತ್ತಿದ್ದು, ದಿನದಿಂದ ದಿನಕ್ಕೆ ರಾಜಕೀಯ ಹೋರಾಟ ಜೋರಾಗಿದೆ.
ಹೌದು, ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಮೈಸೂರಿನ ಪ್ರತಿಷ್ಠಿತ ಕ್ಷೇತ್ರದಲ್ಲಿ ಒಂದಾದ ವರುಣದಲ್ಲಿ ಸಿನಿ ಸ್ಟಾರ್ ಗಳ ಪ್ರಚಾರ ಜೋರಾಗಿದ್ದು, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಮೋಹಕ ತಾರೆ ರಮ್ಯಾ , ಕಾಮಿಡಿ ಕಿಂಗ್ ಸಾಧು ಕೋಕಿಲಾ , ದುನಿಯಾ ವಿಜಯ್, ಪ್ರಚಾರಕ್ಕೆ ಗುರುವಾರ ಹಾಗೂ ಶುಕ್ರವಾರ ಪ್ರಚಾರಕ್ಕೆ ಬಯುತ್ತಿದ್ದಾರೆ.
ವಿಧಾನಸಭೆ ಚುನವಣೆ ಹಿನ್ನೆಲೆ ಈಗಾಗಲೇ ಎಲ್ಲಾ ಕಡೆ ರಾಜಕೀಯ ನಾಯಕರು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪರ ನಟ ಶಿವರಾಜ್ಕುಮಾರ್ ಅಬ್ಬರರ ಪ್ರಚಾರಕ್ಕಿಳಿದಿದ್ದಾರೆ.