ಲಂಚ ಮತ್ತು ಮಂಚದ ಸರ್ಕಾರ ಬಿಜೆಪಿ

ಲಂಚ ಮತ್ತು ಮಂಚದ ಸರ್ಕಾರ ಬಿಜೆಪಿ

ಬಿಜೆಪಿ ಸರ್ಕಾರ ಲಂಚ ಮತ್ತು ಮಂಚದ ಸರ್ಕಾರ ಎಂದು ಲೇವಡಿ ಮಾಡಿರೋ ಡಿಕೆಶಿ, ಆರೋಗ್ಯ ಸಚಿವ ಸುಧಾಕರ್ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದಿದ್ದಾರೆ.

ಹುಬ್ಬಳ್ಳಿ ,ಜು 22 :  ಬಿಜೆಪಿ ಲಂಚ ಮತ್ತು ಮಂಚದ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಹರಿಹಾಯ್ದರು. ಸಚಿವ ಸುಧಾಕರ್ ಭ್ರಷ್ಟಾಚಾರದ ವಿರುದ್ಧ ಎಲ್ಲಿ ಬೇಕಾದ್ರೂ, ಯಾವಾಗ ಬೇಕಾದ್ರೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.

ಸುಧಾಕರ್ ಭ್ರಷ್ಟಾಚಾರ ಕುರಿತು ವೇದಿಕೆ ಸಿದ್ದ ಮಾಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆದರೆ ಬಹಿರಂಗ ಚರ್ಚೆಗೆ ಕಂಡೀಷನ್ ಅಪ್ಲೈ ಎಂದಿದ್ದಾರೆ. ಸುಧಾಕರ ಅಥವಾ ಮತ್ತೊಬ್ಬ ನನಗೆ ಏನೂ ಅಲ್ಲ. ನನ್ನ ಜೊತೆಗೆ ಚರ್ಚೆಗೆ ಸರಿಸಮಾನರು ಬೇಕು.

ಸಿಎಮ್ ಬಸವರಾಜ ಬೊಮ್ಮಾಯಿ, ಮಾಜಿ ಸಿಎಮ್ಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ ಬಹಿರಂಗ ಚರ್ಚೆ ಬಂದ್ರೆ ನಾನು ಸಿದ್ದ ಎಂದರು.

Related