ಹುಬ್ಬಳ್ಳಿಯಲ್ಲಿಂದು  ಕಿಚ್ಚನ ಅಬ್ಬರ

ಹುಬ್ಬಳ್ಳಿಯಲ್ಲಿಂದು  ಕಿಚ್ಚನ ಅಬ್ಬರ

ಹುಬ್ಬಳ್ಳಿ: ಕರ್ನಾಟಕದ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಕೆಲವು ದಿನಗಳಿಂದ ಪ್ರಚಾರದಲ್ಲಿ ತೊಡಗಿದ್ದು, ಇಂದು ಹುಬ್ಬಳ್ಳಿ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ತೆಂಗಿನ ಕಾಯಿ ಅವರ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಹೆಬ್ಬುಲಿ ಕಿಚ್ಚನ ಘರ್ಜನೆ ಜೋರಾಗಿತ್ತು.  ಬಿಜೆಪಿಗೆ ಸೆಡ್ಡು ಹೊಡೆದಿರುವ ಜಗದೀಶ್ ಶೆಟ್ಟರ್ ಕ್ಷೇತ್ರವಾದ ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಪರ ಅಭಿನಯ ಚಕ್ರವರ್ತಿ ಪ್ರಚಾರ ಮಾಡಿದರು.

ಇನ್ನು ಸುದೀಪ್ ಹುಬ್ಬಳಿಗೆ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳ ಸಾಗರವೇ ನೆರೆದಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನ ಸುದೀಪ್ ನೋಡಲು  ಮುಗಿ ಬಿದ್ದಿದ್ದರು. ಕಿಚ್ಚನಿಗೂ ಹುಬ್ಬಳ್ಳಿ ಮಂದಿಗೂ ವಿಶೇಷವಾದ ಸಂಬಂಧ ಇದೆ. ಕಿಚ್ಚನಿಗೆ ಉತ್ತರ ಕರ್ನಾಟಕದಾದ್ಯಂತ ದೊಡ್ಡ ಅಭಿಮಾನಿ ಬಳಗ ಇದೆ. ಇನ್ನು ಪ್ರಚಾರ ಕಣದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸುದೀಪ್ ನೆಚ್ಚಿನ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

Related