ಬೆಂಗಳೂರು ಮಳೆ; ಲೇಔಟ್ ಮುಳುಗಡೆ

  • In State
  • August 4, 2022
  • 204 Views
ಬೆಂಗಳೂರು ಮಳೆ; ಲೇಔಟ್ ಮುಳುಗಡೆ

ಬೆಂಗಳೂರು ಆಗಸ್ಟ 04; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆ ಮುಂದುವರಿದ ಪರಿಣಾಮ ಸರ್ಜಾಪುರ ರಸ್ತೆಯಲ್ಲಿನ ರೈನ್‌ಬೋ ಡ್ರೈವ್ ಲೇಔಟ್ ಸಂಪೂರ್ಣ ಮುಳಗಡೆಯಾಗಿದೆ. ಇಲ್ಲಿನ ನಿವಾಸಿಗಳ ಜೀವನ ಅಸ್ತವ್ಯಸ್ತವಾಗಿದ್ದು, ಇದುವರೆಗೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.

ಈ ಬಡಾವಣೆಯ ಪ್ರತಿ ರಸ್ತೆಗೂ ನೀರು ನುಗ್ಗಿದೆ. ಬಹುತೇಕ ಎಲ್ಲ ಮನೆಗಳು, ವಿಲ್ಲಾಗಳಲ್ಲಿ ಮಳೆ ನೀರಿದೆ. ಇಡೀ ಬಡಾವಣೆಯೇ ಎರಡು ದಿನದಿಂದ ಜಲಾವೃತಗೊಂಡಿದೆ. ಈ ಬಗ್ಗೆ ಬಿಬಿಎಂಪಿಗೆ ಕರೆ ಮಾಡಿದರೂ ಇದುವರೆಗೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದಿಲ್ಲ. ಸಮಸ್ಯೆಯಲ್ಲಿ ಸಿಲುಕಿರುವ ಜನರತ್ತ ಗಮನ ಹರಿಸಿಲ್ಲ.

ಹೀಗಾಗಿ ಈ ಬಡಾವಣೆ ಎಲ್ಲ ನಿವಾಸಿಗಳು ಸಹಾಯ ಮಾಡಿ ಎಂದು ಸರ್ಜಾಪುರ ರಸ್ತೆ ತಡೆದು ಮಳೆಯಲ್ಲೇ ಪ್ರತಿಭಟನೆ ಮಾಡುತ್ತಿದ್ದಾರೆ. ನಾಮಫಲಕ ಹಿಡಿದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ನೆರವಿಗೆ ಧಾವಿಸಿ ಎಂದು ಮನವಿ ಮಾಡಿದ್ದಾರೆ.

Related