ಆದಿಜಾಂಬವ ಸಂಘದ ಗಣೇಶನಿಗೆ ಪ್ರಶಸ್ತಿ

ಆದಿಜಾಂಬವ ಸಂಘದ ಗಣೇಶನಿಗೆ ಪ್ರಶಸ್ತಿ

ಹಟ್ಟಿಚಿನ್ನದಗಣಿ :ಆದಿಜಾಂಬವ ಸಂಘ ಹಾಗೂ ಶ್ರೀರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಲಿಂಗಸುಗೂರು ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಹಬ್ಬದ ಆಯೋಜನೆಗೆ ತಾಲ್ಲೂಕು ಆಡಳಿತದಿಂದ ಶುಕ್ರವಾರ ಸನ್ಮಾನಿಸಿ ಸತ್ಕರಿಸಲಾಯಿತು.

ಲಿಂಗಸುಗೂರಿನ ತಾಲೂಕಾಡಳಿತ, ಪೊಲೀಸ್ ಇಲಾಖೆ, ಪುರಸಭೆ ವತಿಯಿಂದ ನಡೆದ ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ತ ನಡೆದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ, ಸಾಮಾಜಿಕ ಜವಾಬ್ದಾರಿ, ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಅನ್ನ ಪ್ರಸಾದ, ಕೋವಿಡ್ ಲಸಿಕೆಯಂಥಹ ಚಟುವಟಿಕೆಗಳನ್ನು ನಡೆಸಿರುವುದನ್ನು ಗುರುತಿಸಿ ಬಹುಮಾನ ನೀಡಲಾಯಿತು.

ಆದಿಜಾಂಬವ ಸಂಘದ ಅಧ್ಯಕ್ಷ ಭೀಮಾಶಂಕರ್ ಸಿದ್ರಾಮಪ್ಪ ಸಂಗೇಪಾಗ್‍ರಿಗೆ ಉಪವಿಭಾಗಾಧಿಕಾರಿ ರಾಹುಲ್ ಸುಂಕನೂರು, ತಹಶೀಲ್ದಾರ್ ಚಾಮರಾಜ್‍ಪಾಟೀಲ್, ಪೊಲೀಸ್ ಉಪಾಧಿಕ್ಷಕ ಎಸ್.ಎಸ್ ಹುಲ್ಲೂರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ, ವೃತ್ತ ನಿರೀಕ್ಷಕ ಮಹಾಂತೇಶ್ ವಿ.ಸಜ್ಜನ್, ತಾಲ್ಲೂಕು ಆರೋಗ್ಯಾಧಿಕಾರಿ ಅಮರೇಶ್ ಪಾಟೀಲ್, ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗುರುಗುಂಟಾ ಗ್ರಾ.ಪಂ ಸದಸ್ಯ ಚಂದ್ರಶೇಖರ್ ನಾಯಕ್, ಅಮರೇಶ್ ಮೇದಾರ್ ಜೇಗರಕಲ್, ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಲಭೀಮರಾವ್ ಕುಲಕರ್ಣಿ ಇದ್ದರು.

Related