ನಿರಾಶ್ರಿತರಿಗೆ ಸಹಾಯ ಧನ ನೀಡಿ

  • In State
  • August 25, 2021
  • 508 Views
ನಿರಾಶ್ರಿತರಿಗೆ ಸಹಾಯ ಧನ ನೀಡಿ

ಅಕ್ಕಿಆಲೂರ : ಹಾನಗಲ್ ತಾಲೂಕಿನಲ್ಲಿ ತೀವ್ರ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ಹಾನಿಯಾಗಿದ್ದು, ನಿರಾಶ್ರಿತರಿಗೆ ಸರ್ಕಾರ 20 ಸಾವಿರ ರೂ. ಸಹಾಯ ಧನ ನೀಡಬೇಕೆಂದು ರಾಜ್ಯ ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ತಾಲೂಕು ಅಧ್ಯಕ್ಷ ನಾಗರಾಜ ಕ್ಯಾಬಳ್ಳಿ ರಾಜ್ಯ ಸರ್ಕಾರಕ್ಕೆ ಬುಧವಾರ ಒತ್ತಾಯಿಸಿದ್ದಾರೆ. ‘ತಾಲೂಕಿನ ಪ್ರಮುಖ ಬೆಳೆಗಳು, ತೆಗ್ಗು ಪ್ರದೇಶದಲ್ಲಿರುವ ಮನೆಗಳು ನೀರಿಗೆ ಮುಳುಗಡೆಯಾಗಿದೆ. ಸರ್ಕಾರದ ಯೋಜನೆಯಂತೆ ಸಮೀಕ್ಷೆ ಮಾಡಿ ಸಂಪೂರ್ಣ ಹಾನಿಯಾದವರಿಗೆ ಹಣವನ್ನು ನೀಡಬೇಕೆಂದು’ ನಾಗರಾಜ ಕ್ಯಾಬಳ್ಳಿ ಮನವಿ ಮಾಡಿದ್ದಾರೆ.

Related