ದಂಡಾಧಿಕಾರಿಗಳಿಗೆ ಮನವಿ

ದಂಡಾಧಿಕಾರಿಗಳಿಗೆ ಮನವಿ

ಬಾಗಲಕೋಟೆ: ಇಳಕಲ್ ತಾಲೂಕಿನ ಮುಂಚೂಣಿ ಕಾರ್ಯಕರ್ತರ ಖಾಯಂ ನೇಮಕಾತಿ, ಕನಿಷ್ಟ ವೇತನ, ಪಿಂಚಣಿ, ಕೊರೊನಾ ಸುರಕ್ಷತಾ ಸಾಮಾಗ್ರಿ ವಿತರಣೆ ಸೇರಿದಂತೆ ವಿವಿಧ 17 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯ, ಅಂಗನವಾಡಿ, ಬಿಸಿ ಊಟ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಸರ್ಕಾರಿ ಆಸ್ಪತ್ರೆಯ ಆವರಣದಿಂದ ಪ್ರತಿಭಟನೆ ಆರಂಭಿಸಿದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆ ಮಾಡಿ ಆಕ್ರೊಶ ವ್ಯಕ್ತಪಡಿಸಿದರು. ಪ್ರಭಾರಿ ತಾಲೂಕು ದಂಡಾಧಿಕಾರಿ ಬಸಲಿಂಗಪ್ಪ ನಾಯ್ಕೋಡಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ಆಶಾ ಕಾರ್ಯಕರ್ತೆಯರಾದ ಬಸಮ್ಮ ಭೂಪರದ, ಶೋಭಾ ಗುರುಮಠ, ಗೌರಿ ಸಾನು, ಮಂಜುಳಾ ಕಾವಿ, ಜ್ಯೋತಿ ಹೂಗಾರ, ಅಂಗನವಾಡಿ ಕಾಯಕರ್ತೆಯರಾದ ಸಿದ್ದಮ್ಮ ಕಲ್ಗುಡಿ, ಗೀತಾ ಟೆಂಗಿನಕಾಯಿ ಲಕ್ಷ್ಮಿಬಾಯಿ ಬೆಟೇರಿ, ಸುಮಂಗಲಾ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Related