ಕಾಂಗ್ರೆಸ್‌ಗೆ ಮತ ಹಕಲು ಮನವಿ

ಕಾಂಗ್ರೆಸ್‌ಗೆ ಮತ ಹಕಲು ಮನವಿ

ಸಿಂದಗಿ : ದಿ.ಎಂ.ಸಿ.ಮನಗೂಳಿಯವರ ಯೋಜನೆಗಳು ಅಭಿವೃದ್ಧಿ ಹಾದಿ ಕಾಣಬೇಕಾದರೆ ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ನೀಡಿ ಎಂದು ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮನವಿ ಮಾಡಿಕೊಂಡರು.

ಸಿಂದಗಿಪಟ್ಟಣದ ವಿವಿಧ ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿಪರ ಮತಯಾಚಿಸಿ ಮಾತನಾಡಿ, ಸಿಂದಗಿ ಪಟ್ಟಣಕ್ಕೆ ನಮ್ಮ ತಂದೆಯವರ ಅಧಿಕಾರದಲ್ಲಿ ನೀರಿನ ದಾಹವನ್ನು ನೀಗಿಸಿದ್ದಾರೆ.

ಅಲ್ಲದೆ ಮುಂಬರುವ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆಯಲ್ಲಿ ತೊಂದರೆಯಾಗದAತೆ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ರೂ 27.10 ಕೋಟಿ ವೆಚ್ಚದ ನೀರು ತಂದಿದ್ದಾರೆ. ಅಲ್ಲದೆ ಪಟ್ಟಣಕ್ಕೆ ರೂ 92 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ ಕೈಗೆತ್ತಿಕೊಂಡಿದ್ದಾರೆ ಇನ್ನೂ ಕೆಲ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಇದಕ್ಕೂ ಹೆಚ್ಚಿನ ಅಭಿವೃದ್ಧಿಗೆ ನಮ್ಮ ಮನೆತನದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತವನ್ನು ಕೊಟ್ಟು ಆಶೀರ್ವದಿಸಿ ಎಂದರು.

ಈ ಸಂದರ್ಭದಲ್ಲಿ ಹರೀಶ ಬಿಸನಾಳ, ರಫೀಕ ಮಣೂರ, ಶಿವು ರೆಬಿನಾಳ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Related