ನದಿಯಿದ್ದರೂ ನೀರು ಸಿಗದೆ ಜನರ ಪರದಾಟ

ನದಿಯಿದ್ದರೂ ನೀರು ಸಿಗದೆ ಜನರ ಪರದಾಟ

ಸಿರುಗುಪ್ಪ : ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಇದ್ದರೂ ಇಲ್ಲದಂತಾಗಿದೆ. ಹೌದು ಊರಿನ ಗ್ರಾಮಸ್ಥರು 5 ರೂ ಹಣ ಕೊಟ್ಟರೂ ಶುದ್ಧ ನೀರು ಕುಡಿಯಲು ಸಿಗುತ್ತಿಲ್ಲ ಊರಿನಲ್ಲಿ.

ತುಂಗಾಭದ್ರಾ ನದಿಯು ಬಾಗೇವಾಡಿ ಗ್ರಾಮದಿಂದ ಹಾದು ಹೋದರೂ ಊರಿನಲ್ಲಿ ಶುದ್ಧ ಕುಡಿಯುವ ನೀರು ಇದ್ದರೂ ಕುಡಿಯಲು ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರಾದ ಶಂಬುಲಿAಗ ಮಾತನಾಡಿ, ಅಧಿಕಾರಿಗಳಿಗೆ ಮಾಧ್ಯಮದ ಮೂಲಕ ಎಚ್ಚರಿಕೆ ಕೊಟ್ಟರೂ ಹಣ ಕಾಯಿನ್ ಬಾಕ್ಸ್ನಲ್ಲಿದ್ದರೂ ಅದನ್ನು ತೆಗೆದಿಟ್ಟು ಹಣ ಲೂಟಿ ಮಾಡುತ್ತಿದ್ದಾರೆ.

ಕುಡಿಯುವ ನೀರು ಬೇಕು ಎಂದರೆ ಕುಡಿಯುವ ನೀರು ಬಿಡುವ ಹನುಮಂತ ಇವರ ಮನೆಗೆ ಹೋಗಿ ಶುದ್ಧ ನೀರು ತೆಗೆದುಕೊಂಡು ಹೋಗಬೇಕು. ಊರಿನಲ್ಲಿ ನದಿಯಿದ್ದರೂ ಊರಿಗೆ ಇಂತಹ ಪರಿಸ್ಥಿತಿ ಬಂದಿದೆ. ಕುಡಿಯುವ ನೀರಿನ ಘಟಕ ನಿರ್ವಹಣೆ ಬೇರೆಯವರಿಗೆ ಕೊಡಬೇಕು ಆಗ ಮಾತ್ರ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದು ಎಂದು ತಿಳಿಸಿದರು

Related