ಬುದ್ಧಿ ಹೇಳಲು ಬಂದವರಿಗೆ ಚಾಕು ಇರಿದ

  • In Crime
  • March 17, 2020
  • 1790 Views
ಬುದ್ಧಿ ಹೇಳಲು ಬಂದವರಿಗೆ ಚಾಕು ಇರಿದ

ಬೆಳಗಾವಿ, ಮಾ.17 : ಯುವತಿಯನ್ನು ಪೀಡಿಸುತ್ತಿದ್ದ ಯುವಕನಿಗೆ ಬುದ್ಧಿವಾದ ಹೇಳಲು ಹೋದ ಯುವತಿಯ ಕುಟುಂಬಸ್ಥರಿಗೆ ಚಾಕು ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಿನ್ನೆ ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ದೇವಗಿರಿ ಗ್ರಾಮದ ರವಿ ಪರಸು ಬಸ್ಸರಗಿ (19) ಬಂಧಿತ ಯುವಕ. ಇನ್ನೋರ್ವ ಆರೋಪಿ ಅಡಿವೆಪ್ಪಾ ಕುಂಬರಗಿ ಪರಾರಿಯಾಗಿದ್ದು, ಅದೇ ಗ್ರಾಮದ ಯುವತಿ ಚಿಕ್ಕಪ್ಪ ಬಸವರಾಜ ಮಜಗಾವಿ (45) ಹಲ್ಲೆಗೊಳಗಾದ ವ್ಯಕ್ತಿ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಯನ್ನು ಬಂಧಿಸಿಲಾಗಿದೆ. ಮಾ.15ರ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಕೆಲವು ದಿನಗಳಿಂದ ರವಿ ಬಸ್ಸರಗಿ ಎಂಬ ಯುವಕ ಅದೇ ಗ್ರಾಮದ ಯುವತಿಯ ಕೆಲವು ಫೋಟೊಗಳನ್ನು ಇಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದನು. ಆರೋಪಿಯ ಕಿರುಕುಳದಿಂದ ಬೇಸತ್ತ ಯುವತಿ ಮನೆಯವರಿಗೆ ವಿಷಯ ತಿಳಿಸಿದ್ದಾಳೆ.

Related