“ಕಿರಿಕ್ ಕೃಷ್ಣಾ” ಚಿತ್ರ ಶೀಘ್ರ ತೆರೆಗೆ

  • In Cinema
  • September 21, 2020
  • 1247 Views
“ಕಿರಿಕ್ ಕೃಷ್ಣಾ” ಚಿತ್ರ ಶೀಘ್ರ ತೆರೆಗೆ

ಸ್ಯಾಂಡಲ್‍ವುಡ್‍ನಲ್ಲಿ ಪ್ರತಿಭೆಯ ಜೊತೆ ಅದೃಷ್ಟವನ್ನು ಹೊತ್ತು ಬರಬಹುದೇ ಕಿರಿಕ್ ಕೃಷ್ಣಾ ಟೀಂ. ಜನರ ನಾಡಿ ಮಿಡಿತವನ್ನರಿತು, ಹಳ್ಳಿಯ ಸೊಗಡಿನ ಸಿನಿಮಾ ಮಾಡಲು ಹೊರಟಿರುವ ಶ್ರೀ ಕೃಷ್ಣ ಕಂಬೈನ್ಸ್ ಸಂಸ್ಥೆ ಒಬ್ಬ ಸಾಮಾನ್ಯ ಹುಡುಗ ಅವನ ಮುಗ್ಧತೆ ಹಾಗೂ ದಡ್ಡತನದಿಂದಾಗಿ ಹಳ್ಳಿಯ ಮುಖ್ಯಸ್ಥನ ಕೈಯಲ್ಲಿ ನರಳುವ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಿದೆ.

ಬಹುತೇಕ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಹಂತದವರೆಗೆ ಅವರ ಕೈಯಲ್ಲಿ ತೀವ್ರವಾಗಿ ಬಳಲಿದ ನಾಯಕ ನಟ ಮುಂದೇನಾಗುತ್ತಾನೆಂಬ ಕುತೂಹಲವನ್ನು ಮೂಡಿಸುತ್ತಾ ಚಿತ್ರ ಸಾಗುತ್ತದೆ. ಜನರಲ್ಲಿ ಕುತೂಹಲ ಕೆರಳಿಸುತ್ತಾ, ಕಾಮಿಡಿ, ಇಬ್ಬರು ನಾಯಕಿಯರೊಂದಿಗಿನ ಪ್ರಣಯ, ಫ್ಯಾಮಿಲಿ ಸೆಂಟಿಮೆಂಟ್, ಹಿತವಾದ ಸಂಗೀತದೊಂದಿಗೆ ಇನ್ನೇನು ಪ್ರದರ್ಶನಕ್ಕೆ ಸಿದ್ದವಾಗಿದೆ ಎಂದು ಕಿರಿಕ್ ಕೃಷ್ಣಾ ಟೀಂ “ಪ್ರಜಾವಾಹಿನಿ” ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಾಯಕನಾಗಿ ಕೃಷ್ಣ, ನಾಯಕಿಯರಾಗಿ ಭಾನುಶ್ರೀ, ಶೈಲು, ಸಹನಟರಾಗಿ ಜ್ಯೋತಿ ಮುರೂರ್, ಶೋಬ್ರಾಜ್, ರಂಗಾಯಣ ರಘು, ಟೇಬಲ್ ನಾನಿ, ಮೂಗು ಸುರೇಶ್, ಕಲ್ಯಾಣಿ ಮತ್ತು ಕಲ್ಯಾಣಿ ರಾಜು, ಮೈಕೋ ನಾಗರಾಜ್ ಹೀಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರ ತಂಡವು ಕಾರ್ತಿಕ್ ವೆಂಕಟೇಶ್ ಮತ್ತು ಶೋಬ್ರಾಜ್ ಥ್ಸ್ ಅವರ ಬೆಂಬಲದೊಂದಿಗೆ ಸಾಗುತ್ತಿದೆ. ಪ್ರೇಕ್ಷಕರೇ ಕನ್ನಡ ಚಿತ್ರಗಳನ್ನು ನೋಡಿ, ಬೆಂಬಲಿಸಿ ಎಂಬುದೇ ಕೃಷ್ಣಾ ಕಂಬೈನ್ಸ್ ಸಂಸ್ಥೆಯ ಆಶಯ.

Related