ಜಿಲ್ಲಾ ಆರೋಗ್ಯ ಅಧಿಕಾರಿ ದಿಢೀರ್ ಭೇಟಿ

ಜಿಲ್ಲಾ ಆರೋಗ್ಯ ಅಧಿಕಾರಿ ದಿಢೀರ್ ಭೇಟಿ

ಔರಾದ: ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯ ರೆಡ್ಡಿ ರವರು ಭೇಟಿ ನೀಡಿ ಪ್ರತಿಯೊಂದು ವಾರ್ಡ್ಗಳಿಗೆ ಹೋಗಿ ಶೌಚಾಲಯಗಳ ನಿರ್ವಹಣೆ, ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು.
ಡಿ ಗ್ರೂಪ್ ನೌಕರಿಗಳಿಗೆ ಸ್ವಚ್ಛತೆ ಇಲ್ಲದಿರುವುದರಿಂದ ಇನ್ನೂ ಮುಂದೆ ಇದೇ ತರ ಇದ್ದರೆ ನಿಮ್ಮನ್ನು ಕೆಲಸದಿಂದ ತೆಗೆಯಬೇಕಾಗುತ್ತದೆ ಎಂದು ಸೂಚನೆ ಕೊಟ್ಟರು. ಪ್ರತಿಯೊಬ್ಬರು ಕೆಲಸವನ್ನು ಚೆನ್ನಾಗಿ ನಿರ್ವಹಿಸಿ ಆಸ್ಪತ್ರೆಗೆ ಒಳ್ಳೆಯ ರೀತಿ ನೋಡಿಕೊಳ್ಳಿ ಎಂದು ನೌಕರರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ಮೆಡಿಸಿನ್ ಇಲ್ಲದೆ ಹೊರಗಡೆಯಿಂದ ಚೀಟಿ ಬರೆದುಕೊಡುವುದು ನಿಲ್ಲಿಸಿ, ಮೆಡಿಸನ್ ಎಲ್ಲವನ್ನು ಸ್ಟಾಕ್ ಇಟ್ಟುಕೊಳ್ಳಿ ಎಂದು ಸಿಬ್ಬಂದಿಗಳಿಗೆ ಸೂಚನೆ ಕೊಟ್ಟರು.
ಇದೇ ಸಂದರ್ಭದಲ್ಲಿ ಟಿ ಎಚ್ ಒ. ಪ್ರವೀಣ್‌ಕುಮಾರ, ಸಿಎಮಒ ಸಿದ್ದಾರ್ಥ್, ಡಾ.ರಮನ ಪೋಕಲವಾರ, ಡಾ ಪ್ರಮೋದ, ಇಂದ್ರಾಬಾಯಿ ಹಾಗೂ ಸಿಬ್ಬಂದಿ ಇದ್ದರು.

Related