ತಂದೆ ಮೊಬೈಲ್ ನೋಡ್ಬೇಡ ಅಂತ ಬೈದಿದ್ದಕ್ಕೆ, ನೇಣಿಗೆ ಶರಣಾದ ಮಗಳು..!

  • In Crime
  • May 16, 2022
  • 323 Views

ಚಿಕ್ಕಬಳ್ಳಾಪುರ: ಜಾಸ್ತಿ ಮೊಬೈಲ್ ನೋಡಬೇಡ. ರಾತ್ರಿ 11 ಗಂಟೆಯಾದರೂ ಮೊಬೈಲ್ ನೋಡಿಕೊಂಡೇ ಇರುತ್ತೀಯಾ, ಬೆಳಗ್ಗೆ 11 ಗಂಟೆಯಾದರೂ ಎದ್ದೇಳಲ್ಲ. ಹಾಗಾಗಿ ಮೊಬೈಲ್ ಮುಟ್ಟಬೇಡ ಅಂತ ತಂದೆ, ತಾಯಿ ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹೊರವಲಯದ ತಳಗವಾರ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ.

ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದ ನರಸಪ್ಪ ಹಾಗೂ ಜಯಲಕ್ಷ್ಮಮ್ಮನವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದ. ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ನರಸಪ್ಪ ಮತ್ತು ಕೂಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಿದ್ದರು. ಆದರೆ ಭಾನುವಾರ ಬೆಳಗ್ಗೆ ಮನೆಗೆ ಬಂದ ನರಸಪ್ಪ, ಮೊಬೈಲ್ ನೋಡಬೇಡ, ಇಷ್ಟು ಹೊತ್ತಾದರೂ ಎದ್ದಿಲ್ಲ ಅಂತ ಮಗಳಿಗೆ ಬೈದಿದ್ದಾರೆ. ಅದೇ ಕೋಪದಲ್ಲಿ ಮೊಬೈಲ್ ಹೊಡೆದು ಹಾಕಿ ಮನೆಗೆ ಚಿಲಕ ಹಾಕಿಕೊಂಡು ಮನೆಯಿಂದ ಹೊರಟು ಹೋಗಿದ್ದ ಜಯಶ್ರೀ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ. ನಿರ್ಜನ ಪ್ರದೇಶಕ್ಕೆ ತೆರಳಿ ದೊಡ್ಡದಾದ ಜಾಲಿ ಮರಕ್ಕೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Related