ಮಂಗನ ಕಾಯಿಲೆಗೆ ಮೊದಲ ಬಲಿ

  • In Crime
  • May 4, 2022
  • 302 Views

ಶಿವಮೊಗ್ಗ:  ಜಿಲ್ಲೆಯಲ್ಲಿ ಮಂಗನ ಕಾಯಿಲೆ ಆತಂಕ ,ಎರಡು ವರ್ಷಗಳ ಬಳಿಕ ಕೆಎಫ್ ಡಿ ಕಾಯಿಲೆಯಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಅರಳಗೋಡು ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ(55) ಮೃತ ದುರ್ದೈವಿ. ಅರಳಗೋಡು ಕರುಮನೆ ಗ್ರಾಮದ ನಿವಾಸಿಯಾಗಿರುವ ರಾಮಸ್ವಾಮಿ ಕಳೇದ ಏಪ್ರಿಲ್ 24 ರಂದು ಜ್ವರದಿಂದ ಸಾಗರದ ಸರ್ಆರಿ ಆಸ್ಪತ್ರೆಗೆ ದಾಖಲಾಗಿದ್ದು, ಬಳಿಕ ಅವರಿಗೆ ಕೆಎಫ್ ಡಿ ದೃಢಪಟ್ಟ ಕಾರಣ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ದುರಾದೃಷ್ಟವಶಾತ್ ರಾಮಸ್ವಾಮಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರೇ ಮಂಗನ ಕಾಯಿಲೆಗೆ ಮೃತಪಟ್ಟಿರುವುದರಿಂದ ಅರಳಗೋಡು ವ್ಯಾಪ್ತಿಯ ಜನರಲ್ಲಿ ಆತಂಕ ಹೆಚ್ಚಾಗಿದೆ. 2019ರಲ್ಲಿ ಅರಳಗೋಡು ಗ್ರಾಮ ಪಂಚಾಯತಿಯಲ್ಲಿ ಕೆ ಎಫ್ ಡಿ ವ್ಯಾಪಕವಾಗಿ ಹಬ್ಬಿದ್ದು, 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

Related