6 ತಿಂಗಳ ಬಳಿಕ ಕೃಷ್ಣ ದರ್ಶನ ಆರಂಭ

6 ತಿಂಗಳ ಬಳಿಕ ಕೃಷ್ಣ ದರ್ಶನ ಆರಂಭ

ಉಡುಪಿ : ಕಳೆದ 6 ತಿಂಗಳಿಂದ ಉಡುಪಿ ಕೃಷ್ಣಮಠಕ್ಕೆ ನಿರ್ಬಂಧಿಸಲಾಗಿದ್ದ ಭಕ್ತರ ಭೇಟಿಗೆ ಸೋಮವಾರದಿಂದ ಪುನಃ ಅವಕಾಶ ನೀಡಲಾಗಿದೆ.

ಭಕ್ತರು ಕೃಷ್ಣನ ದರ್ಶನಕ್ಕೆ ತೆರಳುವುದಕ್ಕೆ ವಿಶೇಷ ದಾರಿಯನ್ನು ನಿರ್ಮಿಸಲಾಗಿದ್ದು, ನಂತರ ಈ ವಿಶೇಷ ದಾರಿಯಲ್ಲಿ ತೆರಳಿ  ದರ್ಶನಕ್ಕೆ ಚಾಲನೆ ನೀಡಿದರು. ಸೋಮವಾರ ಭಕ್ತರಿಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ರ ತನಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಭಕ್ತರು ದೇವರ ದೀಪಕ್ಕೆ ಹಾಕುತ್ತಿದ್ದ ಎಣ್ಣೆಯು ಕಲಬೆರಕೆ ಆಗದಿರಲಿ ಎಂಬ ದೃಷ್ಟಿಯಿಂದ ಎಣ್ಣೆಯ ಬದಲು ತಾವೇ ಮನೆಯಿಂದ ಎಳ್ಳು ತಂದು ಒಪ್ಪಿಸಬಹುದು ಅಥವಾ ಮಠದ ಕೌಂಟರಲ್ಲಿ ತೆಗೆದುಕೊಂಡು ದೇವರ ಮುಂಭಾಗದಲ್ಲಿ ಒಪ್ಪಿಸಿ ಅದನ್ನು ಗಾಣಕ್ಕೆ ಕೊಟ್ಟು ಶುದ್ಧ ಎಣ್ಣೆಯನ್ನೇ ದೇವರ ದೀಪಕ್ಕೆ ಅರ್ಪಿಸಬಹುದಾಗಿದೆ. ಇದನ್ನು ಸಾಂಕೇತಿಕವಾಗಿ ಇತರ ಮಠಾಧೀಶರು ಎಳ್ಳನ್ನು ಪರ್ಯಾಯ ಶ್ರೀಪಾದರಿಗೆ ಒಪ್ಪಿಸಿ, ಈ ಯೋಜನೆಗೆ ಚಾಲನೆ ನೀಡಿದರು.

Related