ಕೋದಂಡರಾಮ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ರಾಮನವಮಿ ಆಚರಣೆ

ಕೋದಂಡರಾಮ ಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ರಾಮನವಮಿ ಆಚರಣೆ

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಹುಳಿಮಾವು ಗ್ರಾಮದ  ಸುಪ್ರಸಿದ್ದ ಕೋದಂಡರಾಮಸ್ವಾಮಿ  ದೇವಸ್ಥಾನದಲ್ಲಿ ಐತಿಹಾಸಿಕ ಬ್ರಹ್ಮ ರಥೋತ್ಸವದ ಅಂಗವಾಗಿ  ಹುಳಿಮಾವಿನ ವಿಜಯಶ್ರೀ ಬಡಾವಣೆಯಲ್ಲಿ  ಶ್ರೀರಾಮನವಮಿ ಆಚರಣೆ ಮಾಡಿದರು. ನಗರದ ಮುಖಂಡರಿಂದ ಪ್ರತಿ ವರ್ಷದಂತೆ ಈ ವರ್ಷವು ಭಕ್ತಾದಿಗಳಿಗೆ, ಸಾರ್ವಜನಿಕರಿಗೆ  ಮಜ್ಜಗೆ, ಪಾನಕ,  ಅನ್ನ ಸಂಪರ್ಪಣೆ  ಮಾಡುವ ಮೂಲಕ ರಥೋತ್ಸವವನ್ನು ವಿಜೃಂಭನೆಯಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಅರಕೆರೆ ವಾರ್ಡ್ ನ ಬಿಜೆಪಿ ಅಧ್ಯಕ್ಷರು  ಹಾಗೂ  ಗೋಕುಲ್ ಗ್ರೂಪ್ಸ್ ಮಾಲೀಕರಾದ ಎಂ.ಮಂಜುನಾಥ್,  ಬಿಜೆಪಿ ಮುಖಂಡ ಸತೀಶ್‌, ಪ್ರಶಾಂತ್‌, ಮೂರ್ತಿ, ಪವನ್‌ ಮತ್ತಿತರು ಉಪಸ್ಥಿತರಿದ್ದರು.

 

 

Related