ಕೆಕೆಆರ್‌ಡಿಬಿಗೆ ಅನುದಾನ ಹುಸಿ ಭರವಸೆ

ಕೆಕೆಆರ್‌ಡಿಬಿಗೆ ಅನುದಾನ ಹುಸಿ ಭರವಸೆ

ಚಿಂಚೋಳಿ :ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬಜೆಟ್ ಆಗಿರುವ 1,500 ಕೋಟಿ ರೂ. ನಿಂದ 3000 ಕೋಟಿ ರೂ. ಗೆ ದುಪ್ಪಟ್ಟು ಮಾಡೋದಾಗಿ ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಹುಸಿ ಭರವಸೆ ನೀಡಿದ್ದಾರೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮುಂದಿನ ಆಯವ್ಯಯದಲ್ಲಿ 3000 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. 2020-21ರ 1,500 ಕೋಟಿ ರೂ. ನಲ್ಲಿ 1,492 ಕೋಟಿ ಕೊಡೋದಾಗಿ ಹೇಳಲಾಗಿದೆ.
ಇದುವರೆಗೂ 373 ಕೋಟಿ ರೂ. ಬಿಡುಗಡೆಯಾಗಿದ್ದು, 363 ಕೋಟಿ ರೂ. ವೆಚ್ಚವಾದದ್ದು ಎಂದು ಹೇಳಿದ ಅವರು ವಾಸ್ತವ ಹೀಗಿದ್ದಾಗ ಕೆಕೆಆರ್‌ಡಿಬಿ ಇನ್ನೂ ಈ ವರ್ಷದ 1,100 ಕೋಟಿ ರೂ. ನಷ್ಟು ಮೊತ್ತದ ಹಣ ಮಾ.31 2022 ರೊಳಗೆ ವೆಚ್ಚ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Related