ನೂತನ ವಿಶ್ವಕಲ್ಯಾಣಿ ಭವನ ಉಧ್ಘಾಟನೆ

ನೂತನ ವಿಶ್ವಕಲ್ಯಾಣಿ ಭವನ ಉಧ್ಘಾಟನೆ

ಹಮನಾಬಾದ :ಪಟ್ಟಣದ ಸಿದ್ದಾರ್ಥ ಕಾಲೋನಿಯಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ನೂತನ ವಿಶ್ವಕಲ್ಯಾಣಿ ಭವನವನ್ನು ಶಾಸಕ ರಾಜಶೇಖರ ಧರ್ಮಪತ್ನಿ ಪ್ರೇಮಾ ಪಾಟೀಲ್ ಉಧ್ಘಾಟಿಸಿದರು.
ನಂತರ ಮಾತನಾಡಿ ಇಂದಿನ ಮಾನವನ ಆಧುನಿಕ ಜೀವನ ಕೆಲಸದ ಒತ್ತಡದಿಂದ ಮಾನಸಿಕ ನೆಮ್ಮದಿ ಇಲ್ಲದೆ ಪರದಾಡುತ್ತಿದ್ದು, ಮನಃ ಶಾಂತಿಗಾಗಿ ಇಂತಹ ಆಧಾತ್ಮಿಕ ಧರ್ಮಯಾನ ಮತ್ತು ಪ್ರವಚನ ಕೇಳುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಆರೋಗ್ಯವಂತನಾಗಿರಲು ಸಹಾಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ಸಂಚಾಲಕಿ ಪ್ರತಿಮಾ ಅಕ್ಕಾ, ಹುಮನಾಬಾದ ಸಂಚಾಲಕ ಬ್ರಹ್ಮಕುಮಾರ ಪ್ರಭಾಕರ್, ಮಂದಾಕಿನಿ ಅಕ್ಕಾ ಇದ್ದರು.

Related