ಕುಮಾರಸ್ವಾಮಿ ಯಾವುದರಲ್ಲಿ ಉತ್ತಮನು ಎಂದು ಜೆಡಿಎಸ್ ವಿರುದ್ಧ ಗುಬ್ಬಿ ಶ್ರೀನಿವಾಸ್ ಕಿಡಿ..!!

ಕುಮಾರಸ್ವಾಮಿ ಯಾವುದರಲ್ಲಿ ಉತ್ತಮನು ಎಂದು ಜೆಡಿಎಸ್ ವಿರುದ್ಧ ಗುಬ್ಬಿ ಶ್ರೀನಿವಾಸ್ ಕಿಡಿ..!!

ತುಮಕೂರು, ಜೂ 11 : ಕುಮಾರಸ್ವಾಮಿ ಏನು ಉತ್ತಮನಾ.? ಯಾವುದರಲ್ಲಿ ಅವನು ಉತ್ತಮ. ಬೆಳಗ್ಗೆ ಒಂದು ಹೇಳುತ್ತಾನೆ, ಮಧ್ಯಾಹ್ನ ಒಂದು ಹೇಳುತ್ತಾನೆ, ಸಂಜೆ ಒಂದು ಹೇಳುತ್ತಾನೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ಏಕವಚನದಲ್ಲಿಯೇ ಕಿಡಿಕಾರಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದ ಬಗ್ಗೆ ಆಕ್ರೋಶ ಹೊರಹಾಕಿರುವ ಅವರು, ನಾನು ಮತ ಹಾಕುವಾಗ ಕ್ಲಿಯರ್ 3 ರಿಂದ 4 ನಿಮಿಷ ಪೇಪರ್ ಇಟ್ಟುಕೊಂಡು ತೋರಿಸಿದ್ದೇನೆ ಅವಾಗ ನೋಡಬೇಕಿತ್ತು. ಆಗ ಅವನೇನು ಕತ್ತೆ ಕಾಯುತ್ತಿದ್ದಾನಾ..? ಇವರ ಮನೆಯವರೇ ನಾಟಕ ಮಾಡಿಕೊಂಡು ನನ್ನನ್ನು ಮುಗಿಸಬೇಕು ಅಂತಾ ಅವರ ಹಿತೈಶಿಗಳಿಂದ ಕ್ರಾಸ್ ವೋಟ್ ಮಾಡಿಸಿ. ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ನನ್ನನ್ನು ಸೋಲಿಸಲೇ ಬೇಕು ಅಂತಾ ಸಂಚು ರೂಪಿಸಿದ್ದಾರೆ. ನನ್ನ ಮೇಲೆ ಮಾಡಿರುವ ಷಡ್ಯಂತ್ರ ಇದು ಎಂದು ಆರೋಪಿಸಿದ್ದಾರೆ.

ಇನ್ನು ಇದೇ ಕುಮಾರಸ್ವಾಮಿ ಕ್ರಾಸ್ ವೋಟ್ ಮಾಡಿಸಿ ಅದನ್ನು ನನ್ನ ಮೇಲೆ ಹಾಕುತ್ತಿದ್ದಾನೆ. ಅವರಿಗೆ ಗೊತ್ತು ನಮ್ಮ ಅಭ್ಯರ್ಥಿ ಗೆಲ್ಲಲ್ಲ ಅಂತಾ. ಅವನ ಯೋಗ್ಯತೆಗೆ ಯಾರು ವೋಟ್ ಹಾಕಲ್ಲ ಅಂತಾನೂ ಗೊತ್ತಿದೆ. ನನ್ನ ತೇಜೋವಧೆ ಮಾಡೋಕೆ ಈ ರೀತಿಯಾಗಿ ಮಾಡಿದ್ದಾನೆ. ನಾನು ಯಾರಿಗೂ ಕೇರ್ ಮಾಡಲ್ಲ. ನಾನು ನನ್ನ ಸ್ವಾಭಿಮಾನ ಹಾಗೂ ನನ್ನ ಮನಸಾಕ್ಷಿ ವಿರುದ್ಧ ಯಾವತ್ತು ಹೋಗಲ್ಲ. ಇವರು ಇದೆಲ್ಲಾ ನಾಟಕ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಒಬ್ಬ ದೊಡ್ಡ ನಾಟಕಕಾರ. ಒಂತರ ಉಸರವಳ್ಳಿ ಇದ್ದ ಹಾಗೆ ಅವನೊಬ್ಬನೇ ಸತ್ಯ ಹರಿಶ್ಚಂದ್ರ ಅವನೊಬ್ಬನೆ ಸರ್ವಜ್ಞ, ಅಂತ ತಿಳಿದುಕೊಂಡಿದ್ದಾನೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Related