‘ಹಲ್ಲೇಕೊರರ ಬಂಧನಕ್ಕೆ ಒತ್ತಾಯ’

‘ಹಲ್ಲೇಕೊರರ ಬಂಧನಕ್ಕೆ ಒತ್ತಾಯ’

ಶಹಾಪುರ : ಬಳ್ಳಾರಿಯ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಕುಟುಂಬಸ್ಥರ ಮೇಲೆ ಮಾರಣಾಂತಿಕವಾಗಿ ಮಾರಕಾಸ್ತçಗಳಿಂದ ಹಲ್ಲೇ ಖಂಡನೀಯವಾದದ್ದು, ಕೂಡಲೇ ಹಲ್ಲೇಕೊರರನ್ನು ಬಂಧಿಸುವಂತೆ ಒತ್ತಾಯಿಸಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ ಹುಡೇದ್ ಅವರು ತಹಶೀಲ್ದಾರ್ ಮೂಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿ, ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು ಹಾಗೂ ಸರ್ಕಾರ ಇಂತಹ ದುಶ್ಕೃತ್ಯವೆಸಗುವವರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಕಠಿಣ ಕಾನೂನು ರೂಪಿಸಬೇಕು ಮತ್ತು ನೌಕರರಿಗೆ ಸೂಕ್ತ ರಕ್ಷಣೆ ನೀಡಬೇಕು. ಸರ್ಕಾರದ ಯೋಜನೆಗಳು ಜಾರಿ ಮಾಡುವ ಸರ್ಕಾರಿ ಅಧಿಕಾರಿ-ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ಶಾಂತರೆಡ್ಡಿ ತುಂಬಗಿ, ಖಜಾಂಜಿ ಬಸನಗೌಡ ಬೆಳ್ಳಿಕಟ್ಟಿ, ಗುಂಜಾಲಪ್ಪ ನಾಯಕ, ವೀರಭದ್ರ ಬಡಿಗೇರ, ಬಸವರಾಜ ಸಿಂಗ್ರಿ, ಗೋಪಾಲ ಬೀಜಾಸ್ಪುರ್, ನಿಂಗಣ್ಣ ಪುರ್ಲೆ,ಸಿದ್ದು ಕಿರಣಗಿ, ಮಲ್ಲಪ್ಪ ಕಾಂಬ್ಳೆ, ಶ್ರೀಕಾಂತ್ ,ರಮೇಶ ರಾಠೋಡ್, ರೇವಣಸಿದ್ದಪ್ಪ ಇನ್ನಿತರರಿದ್ದರು.

Related