ಸಿದ್ದರಾಮಯ್ಯ ಸನ್ಯಾಸತ್ವ ತೆಗೆದುಕೊಳ್ಳಲಿ ಎಂದ ಅಶ್ವಥ್ ನಾರಾಯಣ್..

ಸಿದ್ದರಾಮಯ್ಯ ಸನ್ಯಾಸತ್ವ ತೆಗೆದುಕೊಳ್ಳಲಿ ಎಂದ ಅಶ್ವಥ್ ನಾರಾಯಣ್..

ಇವರಿಗೆ ರಾಜಕೀಯದಲ್ಲಿ ನೈತಿಕತೆ ಇಲ್ಲ, ಸನ್ಯಾಸತ್ವ ತೆಗೆದುಕೊಂಡು ಹೋಗಬೇಕು ಎಂದು  ರಾಮನಗರದಲ್ಲಿ ಸಚಿವ ಅಶ್ವಥ್ ನಾರಾಯಣ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ರಾಮನಗರ ಜೂ.01:  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವಥ್ ನಾರಾಯಣ ರಾಮನಗರದಲ್ಲಿ ತೀವ್ರತರವಾಗಿ ವಾಗ್ದಾಳಿ ನಡೆಸಿದರು.ಗರೀಬ್ ಕಲ್ಯಾಣ್ ಸಮ್ಮೇಳನದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಕಾನ್ಫರೆನ್ಸ್ ಸಂವಾದದಲ್ಲಿ ಭಾಗಿಯಾಗಿದ್ದ ಅಶ್ವಥ್ ನಾರಾಯಣ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು. ಇದಕ್ಕೂ ಮುನ್ನ ಮಾತನಾಡಿ RSS ನಲ್ಲಿ ಬೇರೆ ಜಾತಿಗೆ ಅವಕಾಶ ಇಲ್ಲ ಎಂದಿದ್ದ ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದರು. ಈಗಾಗಲೇ ನಾಗೇಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಾರ್ಯಾರು ಎಷ್ಟು ಜನ ಕೆಲಸ ಮಾಡಿದ್ದಾರೆಂದು, ಈಗ ಚರ್ಚೆ ಬೇಡ. ಅವರ ರಾಜಕೀಯ ಉಳಿವಿಗೆ, ಓಲೈಕೆಗೆ ಅಸಂಬದ್ಧ ಹೇಳಿಕೆ ಕೊಡ್ತಿದ್ದಾರೆ. RSS ನಲ್ಲಿ ಎಲ್ಲಾ ಜಾತಿ, ಸಮುದಾಯಕ್ಕೆ ಸೇರಿದವರು ಕೆಲಸ ಮಾಡ್ತಿದ್ದಾರೆ.

ಅವರ ಅಸ್ತಿತ್ವ ಉಳಿಸಿಕೊಳ್ಳಲು, ಸುದ್ದಿಯಲ್ಲಿರಲು ಸಿದ್ದರಾಮಯ್ಯ ಇಂತಹ ಹೇಳಿಕೆ ಕೊಡ್ತಾರೆ. ನಾವು RSS ಭಾಗದವರೇ, ನಾವಲ್ಲದೇ ಇನ್ಯಾರು ಮಾತನಾಡಬೇಕಂತೆ, ನಾವು ಬಿಜೆಪಿ – RSS ನಲ್ಲಿದ್ದೇವೆ, ನಾವೇ ಹೇಳಿಕೆ ಕೊಡ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Related