ಮೈಸೂರು, ಜುಲೈ 19 : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಅವಹೇಳನಕಾರಿ ಕಮೆಂಟ್ಹಾಕಿದ ಗೋವಿಂದ ನಾಯಕ ಎಂಬುವವನ ವಿರುದ್ಧ ಯುವ ಕಾಂಗ್ರೆಸ್ಕಾರ್ಯಕರ್ತರು ಹುಣಸೂರು ಪೊಲೀಸ್ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ 2023ರ ಚುನಾವಣೆ ನನ್ನ ಕೊನೆ ಚುನಾವಣೆ, ಮುಂದೆ ಯಾವುದೇ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದ್ದರು. ನಂತರ ಸಿದ್ದರಾಮಯ್ಯರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, “ನೀನು ಎಲ್ಲೇ ನಿಂತರೂ ಸೋಲು, ನಿನ್ನಂಥ ದುರಂಕಾರಿ ದೇಶದಲ್ಲೇ ಯಾರು ಇಲ್ಲ” ಎಂದಿದ್ದ ಆತ ವೈಯಕ್ತಿಕವಾಗಿಯೂ ಸಿದ್ದರಾಮಯ್ಯರನ್ನು ಅವಾಚ್ಯ ಪದಕ ಬಳಕೆ ಮಾಡಿದ್ದರು.
ಹುಣಸೂರು ಠಾಣೆಯಲ್ಲಿ ದೂರು; ಇದು ನನ್ನ ಕೊನೆ ಚುನಾವಣೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಫೇಸ್ಬುಕ್ನಲ್ಲಿ ವಿರುದ್ಧ ಹಲವಾರು ಮಂದಿ ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಹುಣಸೂರು ನಗರದ ಗುರುಗಳ ಕಟ್ಟೆ ಬೀದಿಯ ಗೋವಿಂದ ನಾಯಕ ಎಂಬಾತ ಅವಹೇಳನ ಕಾರಿ ಕಮೆಂಟ್ಮಾಡಿದ್ದಾರೆ.